Site icon Suddi Belthangady

ಪೆರಿಂಜೆ ನೂರಲ್ ಹುದಾ ಮದರಸದಲ್ಲಿ ಮಿಲಾದ್ ಸಂಗಮ

ವೇಣೂರು: ನೂರುಲ್ ಹುದಾ ಅರೆಬಿಕ್ ಮದ್ರಸ ಪೆರಿಂಜೆ ಇದರ ಸಭಾಂಗಣದಲ್ಲಿ ಮಿಲಾದ್ ಆಚರಣೆಯ ಪ್ರಯುಕ್ತ ಪೆರಿಂಜೆ ಮದ್ರಸ ವಿದ್ಯಾರ್ಥಿಗಳಿಂದ ‘ನೂರುನ್ ಆಲಾ ನೂರ್ ‘ಕಾರ್ಯಕ್ರಮವು ಮದ್ರಸ ಆಡಳಿತ ಸಮಿತಿ ಅಧ್ಯಕ್ಷ ಸ್ವಾದಿಕ್ ಪೆರಿಂಜೆ ಇವರ ಅಧ್ಯಕ್ಷತೆಯಲ್ಲಿ ಪಡ್ದಂದಡ್ಕ ನೂರುಲ್ ಹುಧಾ ಜುಮ್ಮಾ ಮಸೀದಿ ಖತೀಬ್ ಅಶ್ರಫ್ ಫೈಝಿ ಅರ್ಕಾಣ ರವರು ಉದ್ಘಾಟಿಸಿದರು.

ಎಸ್. ಕೆ.ಎಸ್. ಬಿ. ವಿ. ಅಧ್ಯಕ್ಷ ಅಫ್ಲಳ್ ಕಿರಾಅತ್ ಪಠಿಸಿದರು. ಸ್ವಾದಿಕ್ ಪೆರಿಂಜೆ ಸ್ವಾಗತಿಸಿದರು. ರೂವಾರಿ ಅಲ್ತಾಫ್ ಮುಸ್ಲಿಯಾರ್ ಸದರ್ ಮುಅಲ್ಲಿಂ ನೂರುಲ್ ಹುದಾ ಮದ್ರಸ ಪೆರಿಂಜೆಯವರು ಪ್ರಾಸ್ತಾವಿಕವಾಗಿ ಮಾತಾಡಿದರು.ಯಾಕೂಬ್ ಪೆರಿಂಜೆ ಆಸಂಶ ಮಾಡಿದ ಖತೀಬ್, ಸದರ್, ಮತ್ತು ನೂರುಲ್ ಹುಧಾ ಜುಮ್ಮಾ ಮಸೀದಿ ಪಡ್ಡಂದಡ್ಕ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ , ಪಿ.ಉಸ್ಮಾನ್ ರವರನ್ನು ಸನ್ಮಾನಿಸಲಾಯಿತು. ಝೈನುದ್ದೀನ್, ಅಬೂಬಕ್ಕರ್, ರಫೀಕ್, ಹನೀಫ್, ಅಬ್ದುಲ್ ಖಾದರ್ ಮತ್ತು ಜಮಾತ್ ಬಾಂದವರು ಉಪಸ್ಥಿತರಿದ್ದರು.

Exit mobile version