Site icon Suddi Belthangady

ಬೆಳ್ತಂಗಡಿಯಲ್ಲಿ ಮಾಜಿ ಶಾಸಕ ವಸಂತ ಬಂಗೇರ ಅಭಿಮಾನಿಗಳ ಬೃಹತ್ ಸಭೆ-ರಾಕೇಶ್ ಶೆಟ್ಟಿ ವಿರುದ್ಧ ಬೃಹತ್ ಪ್ರತಿಭಟನೆಗೆ ಸಿದ್ಧತೆ- ಪೊಲೀಸ್ ಠಾಣೆಗೆ ದೂರು

ಬೆಳ್ತಂಗಡಿ: ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣೆ ಸಭೆಯಲ್ಲಿ ಮಾಜಿ ಶಾಸಕ ಕೆ.ವಸಂತ ಬಂಗೇರ ವಿರುದ್ಧ ಮಾನ ಹಾನಿ ಮತ್ತು ವೈಯಕ್ತಿಕ ತೇಜೋವದೆ ಮಾಡಿದ ಪವರ್ ಟಿ.ವಿ. ಎಂ ಡಿ.ರಾಕೇಶ್ ಶೆಟ್ಟಿ ವಿರುದ್ಧ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ವಸಂತ ಬಂಗೇರರ ಅಭಿಮಾನಿಗಳ ಬಗ್ಗೆ ಸಭೆ ನಡೆಯಿತು.ಸಭೆಯಲ್ಲಿ ಬಹೃತ್ ಪ್ರತಿಭಟನೆ ಮಾಡುವುದು,ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದೆಂದು ನಿರ್ಣಯಿಸಲಾಯಿತು.

ಈ ಬಗ್ಗೆ ಈಶ್ವರ್ ಭಟ್ ಮಾಯಿಲತ್ತೋಡಿ ಯವರ ಪ್ರಧಾನ ಸಂಚಾಲಕತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನ ನಗರ ಘಟಕದ ಅಧ್ಯಕ್ಷ ಸತೀಶ್ ಬಂಗೇರ ಕಾಶಿಪಟ್ನ , ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್ ಗೌಡ , ಜಿ. ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ , ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ , ಶ್ರೀಮತಿ ನಮಿತಾ ಪೂಜಾರಿ , ವಕೀಲ ಮನೋಹರ್ ಕುಮಾರ್ ಇಳಂತಿಲ, ಪ್ರಮುಖರಾದ ಬಿ.ಎಂ. ಭಟ್ ,ಜಯ ವಿಕ್ರಂ , ಇಸ್ಮಾಯಿಲ್ ಕೆ. ಪೆರಿಂಜೆ , ಉಷಾ ಶರತ್ , ಅಯ್ಯೋಬ್ , ಬಿ.ಕೆ.ವಸಂತ , ಕರೀಂ ಗೇರುಕಟ್ಟೆ , ಸೌಮ್ಯ ಉಜಿರೆ ,ಸದಾನಂದ ಶೆಟ್ಟಿ ಮರೋಡಿ ,ಪ್ರವೀಣ್ ಗೌಡ , ವಿನ್ಸೆಂಟ್ ಮಡಂತ್ಯಾರು ,ಅಶ್ರಫ್ ನೆರಿಯ , ಪ್ರಶಾಂತ್ ವೇಗಸ್ ಚಿದಾನಂದ ಎಲ್ಡಡ್ಕ ,ರಫೀಕ್ ಬೆಳ್ತಂಗಡಿ , ಶ್ರೀಮತಿ ಹಾಜಿರಾ ,ಸಂದೀಪ್ ನಿರಲ್ಕೆ , ಶೇಖರ್ ಲಾಯಿಲ ಸೇರಿದಂತೆ ಅಪಾರ ವಸಂತ ಬಂಗೇರ ಅಭಿಮಾನಿಗಳು ಉಪಸ್ಥಿತರಿದ್ದರು.

Exit mobile version