Site icon Suddi Belthangady

ಉಜಿರೆ ಶ್ರೀ ಧ.ಮಂ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಿನಿ ಅನ್ವೇಷಣಾ ಸ್ಪರ್ಧೆ

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅ.17 ರಂದು ಪ್ರೋಜೆಕ್ಟ್ ಐಡಿಯಾ ಸ್ಪರ್ಧೆ ಯಾದ “ಮಿನಿ ಅನ್ವೇಷಣಾ” ವನ್ನು ಬೆಂಗಳೂರಿನ ಅಗಸ್ತ್ಯ ಫೌಂಡೇಶನ್‌ ರವರ ಸಹಯೋಗದೊಂದಿಗೆ ಅಯೋಜಿಸಲಾಗಿತ್ತು.

ಪ್ರಾಂಶುಪಾಲರಾದ ಡಾ.ಅಶೋಕ್‌ ಕುಮಾರ್ ಉದ್ಘಾಟಿಸಿದರು.ಅಗಸ್ತ್ಯ ಫೌಂಡೇಶನ್‌ನ ಭಾಸ್ಕರ್ ರವರು ಮುಖ್ಯ ಅಥಿತಿಯಾಗಿ ಭಾಗವಹಿಸಿದರು.

ವಿದ್ಯಾರ್ಥಿಗಳ ತಮ್ಮ ಆವಿಷ್ಕಾರಗಳನ್ನು ಪ್ರದರ್ಶಿಸಲು ಇದು ಒಂದು ವೇದಿಕೆಯಾಗಿ ಸಹಕಾರಿಯಾಗಿದ್ದು ಇದರಲ್ಲಿ ಒಟ್ಟು 78 ವಿದ್ಯಾರ್ಥಿಗಳು, 26 ತಂಡಗಳಾಗಿ ಉತ್ಸಾಹದಿಂದ ಭಾಗವಹಿಸಿದ್ದರು.

ತೀರ್ಪುಗಾರರಾಗಿ ಸಂಸ್ಥೆಯ ಸಹ ಪ್ರಾದ್ಯಾಪಕರಾದ ಅರ್ಜುನ್ ಮತ್ತು M.I.T.E ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ.ಶಿವರಾಮ್ ಉಪಸ್ಥಿತರಿದ್ದರು.

ಅಂತಿಮವಾಗಿ 6 ತಂಡಗಳು ಬಹುಮಾನ ಪಡೆದುಕೊಂಡವು.

Exit mobile version