Site icon Suddi Belthangady

ಬೆಳಾಲು ಎನ್.ಎಸ್.ಎಸ್ ಶಿಬಿರಾರ್ಥಿ ಮತ್ತು ಪಂಚಾಯತ್ ವತಿಯಿಂದ ಸ್ವಚ್ಛತಾ ಅಭಿಯಾನ

ಬೆಳಾಲು :ಉಜಿರೆ ಎಸ್ ಡಿ ಎಂ ಪಾಲಿಟಿಕ್ನಿಕ್ ಕಾಲೇಜು ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಮತ್ತು ಬೆಳಾಲು ಗ್ರಾಮ ಪಂಚಾಯತ್ ವತಿಯಿಂದ ಅ.18 ರಂದು ಬ್ರಹತ್ ಸ್ವಚ್ಚತಾ ಅಭಿಯಾನ ಹಾಗೂ MGNREGA ಯೋಜನೆಯ 2024-25ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯಡೆ ಅಭಿಯಾನವನ್ನು ಬೆಳಾಲು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ, ಎನ್ ಎಸ್ ಎಸ್ ಯೋಜನಾಧಿಕಾರಿ ಪ್ರಕಾಶ್, ಪಂ.ಉಪಾಧ್ಯಕ್ಷೆ ಗೀತ, ಸದಸ್ಯರುಗಳಾದ ಸತೀಶ್ ಎಳ್ಳುಗದ್ದೆ, ದಿನೇಶ್ ಕೋಟ್ಯಾನ್, ಜಯಂತ ಗೌಡ, ಕೃಷ್ಣಯ್ಯ ಆಚಾರಿ, ಪಿಡಿಒ ಲಕ್ಷ್ಮೀ ಬಾಯಿ, ಕಾರ್ಯದರ್ಶಿ ಮೋಹನ ಬಂಗೇರ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಕುಂಡಡ್ಕ ಅರಣ್ಯ ಸಮಿತಿ ಅಧ್ಯಕ್ಷ, ಸದಸ್ಯರು, ಶ್ರೀ.ಧ.ಮಂ.ಪ್ರೌಢಶಾಲಾ ಮುಖ್ಯಶಿಕ್ಷಕ ರಾಮೃಷ್ಣ ಭಟ್, ವಿಪತ್ತು ನಿರ್ವಹಣಾ ತಂಡದವರು, ಪಂಚಾಯತ್ ಸಿಬ್ಬಂದಿಗಳು, ಊರಿನ ಸಂಘ ಸಂಸ್ಥೆಯ ಪ್ರಮುಖರು, ಊರಿನವರು ಭಾಗವಹಿಸಿದ್ದರು.

Exit mobile version