Site icon Suddi Belthangady

ಧರ್ಮಸ್ಥಳದಲ್ಲಿ ಸಿರಿ ಸಂಸ್ಥೆಯ ನೂತನ ಅಗರಬತ್ತಿ ಉತ್ಪನ್ನಗಳ ಬಿಡುಗಡೆ, ಮತ್ತು ಸಿರಿ ಸಂಸ್ಥೆಗೆ ಸಂಚಾರಿ ವಾಹನ ಹಸ್ತಾಂತರ

ಧರ್ಮಸ್ಥಳ: ಸಿರಿ ಗ್ರಾಮೋದ್ಯೋಗ ಸಂಸ್ಥೆ ಮತ್ತು ಸೈಕಲ್ ಬ್ರಾಂಡ್ ಸಹಯೋಗದಲ್ಲಿ ನೂತನವಾಗಿ ತಯಾರಿಸಲಾದ ಶ್ರುತಿ, ಸ್ತುತಿ, ಸಂಯಮ, ಶ್ರದ್ಧಾ 4 ಅಗರಬತ್ತಿ ಉತ್ಪನ್ನಗಳ ಬಿಡುಗಡೆ ಅ.16 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಲೋಕಾರ್ಪಣೆಗೊಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಸಿರಿ ಸಂಸ್ಥೆಗೆ ನೀಡಿದ 4 ಸಂಚಾರಿ ವಾಹನದ ಕೀಯನ್ನು ಧರ್ಮಸ್ಥಳದ ಮಾತೃ ಶ್ರೀ ಹೇಮಾವತಿ ವಿ. ಹೆಗ್ಗಡೆ ಹಸ್ತಾಂತರಿಸಿದರು.

ಸೈಕಲ್ ಬ್ರಾಂಡ್ ಸಂಸ್ಥೆಯ ಚೈರ್ಮೆನ್ ಅರ್ಜುನ್ ರಂಗ ರಾವ್, ನಿರ್ದೇಶಕಿ ವಿಜಯಲಕ್ಶ್ಮೀ ವಿಜಯ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕನಾಧಿಕಾರಿ ಅನಿಲ್ ಕುಮಾರ್, ಉಪಸ್ಥಿತರಿದ್ದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜನಾರ್ಧನ ಕೆ. ಎನ್. ಪ್ರಾಸ್ತಾವನೆಗೈದರು.ಸಿರಿ ಸಂಸ್ಥೆ ಮತ್ತು ಸೈಕಲ್ ಬ್ರಾಂಡ್ ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿಗಳು, ಯೋಜನೆಯ ಮತ್ತು ಕ್ಷೇತ್ರದ ವಿವಿಧ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

Exit mobile version