Site icon Suddi Belthangady

ನ.25: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಹರಿದ್ವಾರ ಶಾಖಾ ಮಠದಲ್ಲಿ ವಾರ್ಷಿಕ ವರ್ಧಂತಿ ಉತ್ಸವ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನಮ್ ನಿತ್ಯಾನಂದ ನಗರದ ಜಗದ್ಗುರು ಪೀಠದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ಕ್ಷೇತ್ರದ ಶಾಖಾ ಮಠ ಉತ್ತರಾ ಖಂಡದ ದೇವ ಭೂಮಿ ಹರಿದ್ವಾರ ಶಾಖಾ ಮಠದಲ್ಲಿ ನ.25 ರಂದು ವಾರ್ಷಿಕ ಉತ್ಸವ ನಡೆಯಲಿದೆ.

ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಶ್ರೀ ಪಂಚದಶನಾಮ ಜುನಾ ಅಖಾಡ ಅಧ್ಯಕ್ಷ ಮಹಾಂತ್ ಪ್ರೇಮಗಿರಿ ಮಹಾರಾಜ್, ಉಪಾಧ್ಯಕ್ಷ ಮಹಾಂತ್ ವಿದ್ಯಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ವಿಜ್ಞಾನ ನಂದ ಸರಸ್ವತಿ ಮಹಾರಾಜ್, ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಲಲಿತಾನಂದ ಗಿರಿ ಮಹಾರಾಜ್, ಜಯರಾಮ ಆಶ್ರಮದ ಅಧ್ಯಕ್ಷ ಬ್ರಹ್ಮ ಸ್ವರೂಪಿ ಬ್ರಹ್ಮಚಾರಿ ಮಹಾರಾಜ್, ಶ್ರೀ ಮಹಾಂತ್ ದೇವಾನಂದ ಸರಸ್ವತಿ ಮಹಾರಾಜ್, ಮಹಾ ಮಂಡಲೇಶ್ವರ 1008ಶ್ರೀ ಸ್ವಾಮಿ ಯಮುನಾ ಪುರಿ ಮಹಾರಾಜ್, ಮಹಾ ಮಂಡಲೇಶ್ವರ 1008 ಶ್ರೀ ಸ್ವಾಮಿ ಆನಂದ ಚೈತನ್ಯ ಸರಸ್ವತಿ ಮಹಾರಾಜ್ ಇವರುಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡುವರು.

ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲ ಸಾರಿಗೆ ಸಚಿವ ಮಾಂಕಾಳ್ ಎಸ್.ವೈದ್ಯ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವ ಕಾರ್ಕಳದ ಹಾಲಿ ಶಾಸಕ ವಿ.ಸುನೀಲ್ ಕುಮಾರ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಉತ್ತರ ಖಂಡದ ಮಾಜಿ ಮಂತ್ರಿ, ಹಾಲಿ ಶಾಸಕ ಮದನ್ ಕೌಶಿಕ್, ಅಲ್ಲದೆ ದೇಶದ ವಿವಿಧ ಮೂಲೆಗಳಿಂದ ಭಕ್ತರು ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ ಪವಿತ್ರ ಗಂಗಾ ಆರತಿ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Exit mobile version