Site icon Suddi Belthangady

ನೆಲ್ಯಾಡಿ ಅಲ್ಫೋನ್ಸ ಮಾತೃ ವೇದಿಕೆಯಿಂದ ಆಶಾಭವನ ಸಂದರ್ಶನ

ನೆಲ್ಯಾಡಿ :ನೆಲ್ಯಾಡಿ ಅಲ್ಫೋನ್ಸ ಚರ್ಚ್ ನ ಮಾತೆಯರ ವೇದಿಕೆಯಿಂದ ಇಚ್ಚಿಲಂಪಾಡಿಯ ಮಹಿಳಾ ಪುನರ್ವಸತಿ ಕೇಂದ್ರ ಆಶಾಭವನಕ್ಕೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಆಶ್ರಮವಾಸಿಗಳಿಗಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.ಪುನರ್ವಸತಿ ಕೇಂದ್ರಕ್ಕೆ ಅಗತ್ಯವಾದ ಆಹಾರ ಹಾಗೂ ಗ್ರಹೋಪಯೋಗಿ ವಸ್ತುಗಳನ್ನು ಅಲ್ಫೋನ್ಸ ಮಾತ್ರ ವೇದಿಕೆಯ ಪರವಾಗಿ ಕೊಡಲಾಯಿತು.

ಸಂಘದ ಅಧ್ಯಕ್ಷೆ ಜೇಸಿಂತ ಕೆ ಜೆ, ಪದಾಧಿಕಾರಿಗಳಾದ ಮೇರಿ ಜಾನ್, ಲಿನ್ಸಿ ಮನೋಜ್, ಶೈನಿ ಮನೋಜ್, ಡಯಾನಾ ಶಾಜಿ, ಕೆ ಎಸ್ ಎಂ ಸಿ ಎ ನಿರ್ದೇಶಕರು ಧರ್ಮ ಗುರುಗಳು ಆದ ವಂದನಿಯ ಶಾಜಿ ಮಾತ್ಯು ತಂಡದಲ್ಲಿದ್ದರು.

Exit mobile version