Site icon Suddi Belthangady

ಧರ್ಮಸ್ಥಳ: ಶ್ರೀ ಮಂ.ಅ.ಪ್ರೌ.ಶಾಲೆಯಲ್ಲಿ ಕಲಾ ಶಿಬಿರ

ಧರ್ಮಸ್ಥಳ: ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ ಇಲ್ಲಿ ಅ.09ರಂದು ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ನಡೆಸುವ ಕಲಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಉದ್ಘಾಟಕರಾಗಿ ಆಗಮಿಸಿದ ಶ್ರೀ ಧ.ಮಂ.ಅನುದಾನಿತ ಸೆಕೆಂಡರಿ ಶಾಲೆ ಉಜಿರೆ ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಶ್ರೀ ರಾಮ ಬಾಯಾರು ಮಧುಬನಿ ಕಲೆಯ ಮಹತ್ವದ ಬಗ್ಗೆ ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕರಾದ ಪದ್ಮರಾಜು ಎನ್ ರವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ, ಚಿತ್ರಕಲೆಯ ಉಪಯೋಗದ ಬಗ್ಗೆ ತಿಳಿಸಿದರು.

ಹಿರಿಯ ಶಿಕ್ಷಕರಾದ ಜಯರಾಮ ಮಯ್ಯರವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಸಹ ಶಿಕ್ಷಕರಾದ ಶಶಿಧರ್ ಡಿ ರವರು ಸ್ವಾಗತಿಸಿ, ರೂಪೇಶ್ ರವರು ವಂದಿಸಿದರು.ಕುಮಾರಿ ಶ್ವೇತಾ ಎಸ್ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

Exit mobile version