Site icon Suddi Belthangady

ಕಣಿಯೂರು ಘನ ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ

ಪದ್ಮುಂಜ: ಇಲ್ಲಿಯ ಕಣಿಯೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿಯೂರು ಬೋರುಕಟ್ಟೆ ಎಂಬಲ್ಲಿ ನೂತನವಾಗಿ ನಿರ್ಮಿಸಿದ ಘನ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನಾ ಕಾರ್ಯಕ್ರಮ ಅ.11 ರಂದು ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ ಎನ್ ಇವರು ಉದ್ಘಾಟಿಸಿದರು.

ಕಣಿಯೂರಿನ ಹಲೇಜಿ ಅರ್ಚಕರಾದ ಪ್ರಸನ್ನ ಕುಮಾರ್ ಮುಚ್ಚಿನ್ನಾಯ ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಉಪಾಧ್ಯಕ್ಷೆ ಜಾನಕಿ, ಪಂ ಸದಸ್ಯರಾದ ಯಶೋಧರ ಶೆಟ್ಟಿ, ಸೀತಾರಾಮ ಮಡಿವಾಳ, ಪ್ರವೀಣ್, ಸೇಸಪ್ಪ ಮೂಲ್ಯ, ಗಾಯತ್ರಿ, ಸುಮತಿ ಬೇಂಗಾಯಿ, ಪ್ರಿಯಾಂಕ, ಮೋಹಿನಿ, ಸಿಬ್ಬಂದಿಗಳಾದ ಉಮೇಶ್, ಪ್ರದೀಪ್, ಲಕ್ಷ್ಮೀ, ರತ್ನ, ರೇವತಿ, ಗಿರಿಯಪ್ಪ, ಸುನಂದ ಉಪಸ್ಥಿತರಿದ್ದರು.ಕಾರ್ಯದರ್ಶಿ ರಮೇಶ್ ರವರು ಸ್ವಾಗತಿಸಿ, ಧನ್ಯವಾದ ಸಲ್ಲಿಸಿದರು.

Exit mobile version