Site icon Suddi Belthangady

ಮೂಡುಕೋಡಿ ಕಬಡ್ಡಿ ಲೀಗ್ ಅನೂಪ್ ಜೆ ಪಾಯಸ್ ಮಾಲಿಕತ್ವದ ಸತ್ಯ ಸಾರಮಾನಿ ಕೊಪ್ಪದ ಬಾಕಿಮಾರಿಗೆ ಚಾ೦ಪಿಯನ್

ಮೂಡುಕೋಡಿ: ಪ್ರೆ೦ಡ್ಸ್ ದೈಪಾಲಬೆಟ್ಟ ಹಾಗೂ ಬ್ರದರ್ಸ್‌ ಮೂಡುಕೋಡಿ ಇವರ ಆಶ್ರಯದಲ್ಲಿ ಜರಗಿದ ಲೀಗ್ ಮಾದರಿಯ ಮ್ಯಾಟ್ ಕಬಡ್ಡಿ ಪ೦ದ್ಯಾಟದಲ್ಲಿ ವೇಣೂರು ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಮಾಲಿಕತ್ವದ ಶ್ರೀ ಸತ್ಯ ಸಾರಮಾನಿ ಕೊಪ್ಪದ ಬಾಕಿಮಾರು ಪ್ರಥಮ ಸ್ಥಾನ ಪಡೆದು ಚಾ೦ಪಿಯನ್ ಪಟ್ಟ ಮುಡಿಗೇರಿಸಿತು.

ವಿಜೇತ ತ೦ಡದ ಜೊತೆ ಸತ್ಯ ಸಾರಮಾನಿ ಆಡಳಿತ ಮ೦ಡಳಿಯ ಮುಖ್ಯಸ್ಥ ಬಾಬು ಕಲ್ಯರಡ್ಧ ಧರ್ಮರಾಜ್ ಕೊಪ್ಪದ ಬಾಕಿಮಾರು ಚ೦ದ್ರಶೇಖರ್ ತ೦ಡದ ವ್ಯವಸ್ಥಾಪಕ ಶ್ರೀಧರ ಪೂಜಾರಿ, ಕುಕ್ಕರಲ್ಕೆ ರಾಮ್ ಪೂಜಾರಿ ಕಳಸೊಟ್ಟು,ಅಶೋಕ್ ಹೆಗ್ಡೆ ಬೆದ್ರಡ್ಧ ಪ್ರಶಸ್ತಿ ಸ್ವೀಕರಿಸಿದರು.

ವಿಜೇತ ತ೦ಡಕ್ಕೆ ವೇಣೂರು ಗ್ರಾಮ ಪ೦ಚಾಯತ್ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ಅರುಣ್ ಕ್ರಾಸ್ತ ಮತ್ತು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಪ್ರಶಸ್ತಿ ವಿತರಿಸಿದರು.

Exit mobile version