Site icon Suddi Belthangady

ಶ್ರೀ ರಾಮ ಕ್ಷೇತ್ರದ ಪ್ರತಿಷ್ಠಾ ನವದುರ್ಗೆ ಸನ್ನಿಧಿಯಲ್ಲಿ ಅ.15 ರಿಂದ 24ರ ವರೆಗೆ ನವರಾತ್ರಿ ವಿಶೇಷ ಪೂಜೆ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್‌ನಲ್ಲಿ ಪ್ರತಿಷ್ಠಾಪನೆಗೊಂಡಿರುವ ಮಹಾಶಕ್ತಿ ಸ್ವರೂಪಿಣಿಯರಾದ `ನವದುರ್ಗೆ’ಯವರ ದಿವ್ಯ ಸಾನಿಧ್ಯದಲ್ಲಿ ಅ.15 ರಿಂದ 24ರ ವರೆಗೆ ನವರಾತ್ರಿ ವಿಶೇಷ ಪೂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಕ್ಷೇತ್ರದ ಪೀಠಾಧೀಶ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿದೆ.

ಅ.15 ಶೈಲಪುತ್ರಿ ದೇವಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅನ್ನಛತ್ರ, ಅ.16 ಬ್ರಾಹ್ಮಣಿ ದೇವಿ ಅ.17 ಚಂದ್ರಘಂಟಾ ದೇವಿ ಅ.18 ಅನ್ನಪೂರ್ಣೇಶ್ವರಿ ದೇವಿಗೆ, ಅ19 ಸ್ಕಂದಮಾತ ದೇವಿಗೆ ಮತ್ತು ಶ್ರೀ ದುರ್ಗಾಪರಮೇಶ್ವರಿ ವಿಶೇಷ ಚಂಡಿಕಾ ಹೋಮ, ಅ.20 ಕಾತ್ಯಾಯಿನಿ ದೇವಿಗೆ, ಅ.21 ಕಾಳರಾತ್ರಿ ದೇವಿಗೆ ಅ.22 ಮಹಾಗೌರಿ ದೇವಿಗೆ, ಅ.23 ಸಿದ್ದಿದಾತ್ರಿ ದೇವಿಗೆ ಮತ್ತು ಆಯುಧ ಪೂಜೆ ಅ.24
ವಿಜಯದಶಮಿ ವಿಶೇಷ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Exit mobile version