Site icon Suddi Belthangady

ಅಪಘಾತಕ್ಕೆ ಒಳಗಾದವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ ಕೊಕ್ಕಡದ ಕಾಂಗ್ರೆಸ್ ನಾಯಕರು

ಧರ್ಮಸ್ಥಳ: ಬೆಳ್ತಂಗಡಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ರವರು ಕಾರ್ಯಕ್ರಮಕ್ಕೆ ತೆರಳಿ ಮರಳಿ ಬರುವಾಗ ಧರ್ಮಸ್ಥಳ ಸಮೀಪ ಕಂದಕಕ್ಕೆ ಉರುಳಿ ಅಪಘಾತಕ್ಕೆ ಒಳಗಾದ ವಾಹನವನ್ನು ಕಂಡ ಯುವ ಕಾಂಗ್ರೇಸ್ ಗ್ರಾಮೀಣ ಘಟಕದ ಅಧ್ಯಕ್ಷರಾದ ಎಸ್ ಕೆ.ಹಕೀಮ್ ಕೊಕ್ಕಡ, ಕಾಂಗ್ರೆಸ್ ಗ್ರಾಮೀಣ ಸಮಿತಿಯ ಮುಖಂಡರಾದ ಮುಹಮ್ಮದ್ ಕಲಂದರ್ ಕೊಕ್ಕಡ ಹಾಗೂ ನಾಗೇಶ್ ಕುಮಾರ್ ಅಡ್ಮಿನ್ ಬಳಗದ ಗ್ರೂಪ್ ಅಡ್ಮಿನ್ ಆಶಿಫ್ ಐಡಿಯಲ್, ಸದಸ್ಯ ವಾಜಿದ್ ರವರು ಸೇರಿ ಕಂದಕಕ್ಕೆ ಉರುಳಿದ ಕಾರಿನಲ್ಲಿದ್ದ ಎರಡು ಚಿಕ್ಕ ಮಕ್ಕಳು ಹಾಗೂ ಕುಟುಂಬದವರನ್ನು ವಾಹನದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

Exit mobile version