Site icon Suddi Belthangady

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ಸಾಕ್ಷ್ಯ ಚಿತ್ರ ನಟನಾ ತರಬೇತಿ ಕಾರ್ಯಕ್ರಮ

ಬೆಳ್ತಂಗಡಿ: ಬೆಳ್ತಂಗಡಿಯ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಗಾಗಿ ಯು ಪ್ಲಸ್ ಚಾನೆಲ್ ಉಜಿರೆ ಇವರ ಸಹಯೋಗದೊಂದಿಗೆ ಸಾಕ್ಷ್ಯ ಚಿತ್ರ ನಟನಾ ತರಬೇತಿ ಕಾರ್ಯಕ್ರಮ ಸೆ.20 ರಂದು ಆಯೋಜಿಸಲಾಗಿತ್ತು.

ಯು ಪ್ಲಸ್ ಚಾನೆಲ್ ಪ್ರೋಗ್ರಾಮ್ ಪ್ರೊಡ್ಯೂಸರ್ ಕುಮಾರೇಶ್ ತರಬೇತಿ ಕಾರ್ಯಕ್ರಮವನ್ನು ನೀಡಿದರು.

ನಿವೃತ್ತ ಪ್ರಾಂಶುಪಾಲ ಡಾ. ಆಂಟನಿ ಟಿ.ಪಿ ಶುಭ ಹಾರೈಸಿದರು.ಪ್ರಾಂಶುಪಾಲರಾದ ಪ್ರೊ.ರಾಘವ ಎಫ್ ಅಧ್ಯಕ್ಷತೆಯನ್ನು ವಹಿಸಿದ್ದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪ್ರೊ.ರೊನಾಲ್ಡ್, ಪ್ರವೀಣ್ ಕೊರೆಯಾ ಕಾರ್ಯಕ್ರಮ ನಿರೂಪಿಸಿದರು.

Exit mobile version