Site icon Suddi Belthangady

ಬೆಳ್ತಂಗಡಿ ಸ.ಪ್ರ.ದ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸ್ತುತ ಸಾಲಿನ ಚಟುವಟಿಕೆಗಳ ಉದ್ಘಾಟನೆ

ಬೆಳ್ತಂಗಡಿ: ಸ.ಪ್ರ.ದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2023-24ನೇ ಸಾಲನ ಚಟುವಟಕೆಗಳನ್ನು ಡಾ.ಜೋಸೆಫ್ ಎನ್.ಎಮ್ ಅವರು ಸೆ.15 ರಂದು ಉದ್ಘಾಟಿಸಿ ಎನ್.ಎಸ್.ಎಸ್ ಗೀತೆಗಳನ್ನು ಹಾಡಲು ತರಬೇತಿಯನ್ನು ನೀಡಿದ ಅವರು ಮಳೆ ನೀರು ಕೊಯ್ದು, ನಾಯಕತ್ವ, ವ್ಯಕ್ತಿತ್ವ ವಿಕಸನ, ಪರಿಸರ ಸಂರಕ್ಷಣೆ, ಸಾಮಾಜಿಕ ಜವಾಬ್ದಾರಿ, ಆರೋಗ್ಯ ಪೂರ್ಣ ಸಮಾಜದಲ್ಲಿ ಎನ್.ಎಸ್.ಎಸ್ ಸ್ವಯಂ ಸೇವಕರ ಪಾತ್ರದ ಬಗ್ಗೆ ಜಾಗೃತಿಯನ್ನು ತಿಳಿಸಿದರು ರಾಷ್ಟ್ರೀಯ ಸೇವಾ ಯೋಜನೆಯ ಸಲಹೆಗಾರರಾದ ಡಾ. ಸುಬ್ರಹ್ಮಣ್ಯಕ ಇವರು ಎನ್.ಎಸ್.ಎಸ್ ನ ಮಹತ್ವದ ಕುರಿತು ನುಡಿದರು ಪ್ರೊ.ರೊನಾಲ್ಡ್, ಪ್ರವೀಣ್ ಕೊರೆಯಾ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಪ್ರೊ.ಕವಿತಾ ರಾಷ್ಟ್ರೀಯ ಸೇವಾ ಯೋಜನಾಧಿಕಾಲ ಹಾಗೂ ಎನ್.ಎಸ್.ಎಸ್. ನಾಯಕ, ನಾಯಕಿಯರಾದ ಕು, ಉಮಾವತಿ, ರೋಶು ಶಿವಾನಂದ ಹಾಗೂ ನಿತಿನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಗದೀಶ ಪ್ರಥಮ ಬಿ.ಎ ಸ್ವಾಗತಿಸಿದರು. ಸಂದೇಶ್ ಪ್ರಥಮ ಟಿ.ಟಿ.ಎ ವಂದಿಸಿದರು, ಕು. ರಶ್ಮಿತಾ ಮತ್ತು ಸನ್ನಿಧಿ ದ್ವಿತೀಯ ಅ.ಟಿ.ಎ ನಿರೂಪಿಸಿದರು.

Exit mobile version