Site icon Suddi Belthangady

ಶ್ರೀ ರಾಮ ಕ್ಷೇತ್ರ ಪೀಠಾಧೀಶ ಬ್ರಹಾನಂದ ಶ್ರೀ ಬರೋಡ ಬಿಲ್ಲವ ಸಂಘದ ಸಿಲ್ವರ್ ಜ್ಯುಬುಲಿಯಲ್ಲಿ ಆಶೀರ್ವಚನ

ಧರ್ಮಸ್ಥಳ: ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಗರ ಧರ್ಮಸ್ಥಳ ಕನ್ಯಾಡಿ ಇಲ್ಲಿಯ ಜಗದ್ಗುರುಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವಾಮೀಜಿಯವರು ತಮ್ಮ ಶಿಷ್ಯ ಪರಿವಾರದೊಂದಿಗೆ ಉತ್ತರ ಭಾರತದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅ.1ರಂದು ಬರೋಡ ಬಿಲ್ಲವ ಸಂಘದಲ್ಲಿ 25ನೇ ವರ್ಷದ ಸಿಲ್ವರ್ ಜುಬಿಲಿ ಸೆಲೆಬ್ರೇಶನ್ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಹಾಗೂ ಬಿಲ್ಲವ ಭಕ್ತಾಧಿಗಳಿಂದ 12 ಕುಂಡಗಳಲ್ಲಿ ವಿಶೇಷ ಗಾಯತ್ರಿ ಯಜ್ಞ ನಡೆಯಿತು.

Exit mobile version