Site icon Suddi Belthangady

ಶ್ರೀ ರಾಮ ಕ್ಷೇತ್ರ ಪೀಠಾಧೀಶ ಬ್ರಹ್ಮಾನಂದ ಶ್ರೀ ಉತ್ತರ ಭಾರತ ಪ್ರವಾಸ-ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಧರ್ಮಸ್ಥಳ:ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನ ನಿತ್ಯಾನಗರ ಧರ್ಮಸ್ಥಳ ಕನ್ಯಾಡಿ ಇಲ್ಲಿಯ ಜಗದ್ಗುರುಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಸ್ವಾಮೀಜಿಯವರು ತಮ್ಮ ಶಿಷ್ಯ ಪರಿವಾರದೊಂದಿಗೆ ಉತ್ತರ ಭಾರತದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಅ.1ರಂದು ಬರೋಡ ಬಿಲ್ಲವ ಸಂಘದಲ್ಲಿ 25ನೇ ವರ್ಷದ ಸಿಲ್ವರ್ ಜುಬಿಲಿ ಸೆಲೆಬ್ರೇಶನ್ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವಹಿಸಿ ಆಶೀರ್ವಚನ ನೀಡಲಿರುವರು.ಅ.2 ರಂದು ದೆಹಲಿಯಲ್ಲಿ ಕ್ಷೇತ್ರದ ಟ್ರಸ್ಟ್ ಭಗವತಿ ಪ್ರಸಾದ್ ಬಿಹಾನಿಯ ನೇತೃತ್ವದಲ್ಲಿ ಗುರುವಂದನೆ ನಡೆಯಲಿದ್ದು ಅದರಲ್ಲಿ ದಿವ್ಯ ಸಾನಿದ್ಯ ವಹಿಸಲಿರುವರು ಅ.3ರಿಂದ ಹರಿದ್ವಾರದಲ್ಲಿಬೇರೆ ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Exit mobile version