Site icon Suddi Belthangady

ದೊಂಡೋಲೆ ಶ್ರೀನಿವಾಸ ಭಟ್ ರವರ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ-ಸ್ನೇಕ್ ಜಾಯ್ ರಿಂದ ರಕ್ಷಣೆ

ಧರ್ಮಸ್ಥಳ: ದೊಂಡೋಲೆಯ ಶ್ರೀನಿಧಿ ಮನೆಯ ಶ್ರೀನಿವಾಸ ಭಟ್ ರವರ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆಯಾಗಿತ್ತು.

ಇಂದು ಬೆಳಗ್ಗೆ ಮನೆಯ ಹಿಂಬದಿಯ ಕೊಠಡಿಯ ಸಮೀಪ ಕಾಳಿಂಗವನ್ನು ನೋಡಿ ಮನೆಯವರು ಬೆಚ್ಚಿಬಿದ್ದಿದ್ದರು.

ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ನೋಡಿದ ನಂತರ ಭಯಭೀತರಾದ ಮನೆಯವರು ಸ್ನೇಕ್ ಜಾಯ್ ರವರಿಗೆ ಕರೆಮಾಡಿ ತಿಳಿಸಿದರು. ಕರೆಗೆ ತಕ್ಷಣ ಸ್ಪಂದಿಸಿದ ಸ್ನೇಕ್ ಜಾಯ್ ಆಗಮಿಸಿ ಕಾಳಿಂಗ ಸರ್ಪವನ್ನು ರಕ್ಷಿಸಿದರು.

ಈ ವೇಳೆ,ಮನೆಯವರಾದ ಸಂಧ್ಯಾ ಭಟ್, ಐಶ್ವರ್ಯ ಭಟ್, ದೊಂಡೋಲೆಯ ಸೂರ್ಯನಾರಾಯಣ ರಾವ್, ಕಿರಣ್ ದೊಂಡೋಲೆ,ಮಹೇಂದ್ರ ದೊಂಡೋಲೆ,ನವೀನ್ ಚಂದ್ರ ಸಪಲ್ಯ ದೊಂಡೋಲೆ, ವೆಂಕಪ್ ಗೌಡ,ಪತ್ರಕರ್ತ ದಾಮೋದರ್ ದೊಂಡೋಲೆ ಉಪಸ್ಥಿತರಿದ್ದರು.

Exit mobile version