Site icon Suddi Belthangady

ಕಲ್ಮಂಜ : ರೂ.3.25ಲಕ್ಷ ಅನುದಾನದಲ್ಲಿ ದಾನಿಗಳ ನೆರವಿನಿಂದ ಗೃಹ ಹಸ್ತಾಂತರ-ನವೀಕೃತಗೊಳಿಸಿದ ಗೃಹಪ್ರವೇಶ

ಕಲ್ಮಂಜ : ಕಲ್ಮಂಜ ಗ್ರಾಮದ ಅಕ್ಷಯನಗರ ಎಂಬಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ ಗೆ ಒಳಪಟ್ಟು ವಾಸಿಸುತ್ತಿದ್ದ ಸಿರಿಲ್ ಗೀತಾ ಪಿಂಟೊ ರವರ ಮನೆಯು ಸಂಪೂರ್ಣ ಕುಸಿಯುವ ಭೀತಿಯಿಂದ ಎದುರುತಿಸುತ್ತಿದ್ದ ಸಂದರ್ಭದಲ್ಲಿ ಉಜಿರೆ ಸಂತ ಅಂತೋನಿ ಚರ್ಚ್ ಧರ್ಮಗುರು ವ. ಫಾ. ಜೇಮ್ಸ್ ಡಿಸೋಜಾ ಹಾಗೂ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಫೇಸ್ ರವರ ಸಹಕಾರ ದೊಂದಿಗೆ ಸಿ. ಒ. ಡಿ. ಪಿ ಮಂಗಳೂರು ಹಾಗೂ ಧಾನಿಗಳ ನೆರವಿನೊಂದಿಗೆ ರೂ. 325000/-ವಿನಿಯೋಗಿಸಿ ಸಂಪೂರ್ಣ ನವೀಕೃತಗೊಳಿಸಲಾಯಿತು.

ಇದರ ಆಶೀರ್ವಚನ ಸೆ. 24ರಂದು ನೆರವೇರಿತು. ಉಜಿರೆ ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವ. ಫಾ. ವಿಜಯ್ ಲೋಬೊ ಆಶೀರ್ವಚನ ನೆರೆವೇರಿಸಿದರು.

ದಯಾಳ್ ಭಾಗ್ ಆಶ್ರಮದ ಧರ್ಮಗುರು ವ. ಫಾ. ಫೆಡ್ರಿಕ್ ಬ್ರ್ಯಾಕ್ಸ್, ಉಜಿರೆ ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಆಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗದ ಮುಖ್ಯಸ್ಥೆ ಲವೀನಾ ಫೆರ್ನಾಂಡಿಸ್, ಚರ್ಚ್ ಆರ್ಥಿಕ ಸಮಿತಿ ಸದಸ್ಯರು ವಾಳೆಯ ಗುರಿಕಾರರು, ಪಾಲನಾ ಮಂಡಳಿ ಸದಸ್ಯರು ಚರ್ಚ್ ಧರ್ಮ ಭಗಿನಿಯರು ಧಾನಿಗಳು ಉಪಸ್ಥಿತರಿದ್ದರು.

Exit mobile version