Site icon Suddi Belthangady

ತೆಕ್ಕಾರು: ಬಾಜಾರು ಕ್ವಾಟ್ರಸ್ ಬಳಿ ಸ್ಕೂಟರ್ ಗೆ ಆಟೋ ಡಿಕ್ಕಿ

ಬೆಳ್ತಂಗಡಿ: ಅಟೋ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿರುವ ಘಟನೆ ಬೆಳ್ತಂಗಡಿ ತಾಲೂಕು ತೆಕ್ಕಾರು ಗ್ರಾಮದ ಬಾಜಾರು ಕ್ವಾಟ್ರಸ್ ಎಂಬಲ್ಲಿ ನಡೆದಿದೆ.

ಮಣಿನಾಲ್ಕೂರು ಗ್ರಾಮ, ಬಂಟ್ವಾಳ ನಿವಾಸಿಯಾದ ತೇಜಸ್ವಿನಿಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರಿಗೆ, ಚಾಲಕ ವಸಂತ ಎಂಬವರು ಅಟೋ ರಿಕ್ಷಾವನ್ನು ತೆಕ್ಕಾರಿನ ಬಾಜಾರು ಕ್ವಾಟ್ರಸ್ ಎಂಬಲ್ಲಿ ನಿರ್ಲಕ್ಷ್ಯತನದಿಂದ ಚಲಾಯಿಸಿದ ಪರಿಣಾಮ ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ತೇಜಸ್ವಿನಿಯವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Exit mobile version