Site icon Suddi Belthangady

ಚಾಲಕ‌ನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು- ಕಾರ್ಮಿಕ ಮುಖಂಡ ಬಿ.ಎಂ.ಭಟ್ ಅವರ ಮಾಲಿಕತ್ವದ ಕಾರು

ಧರ್ಮಸ್ಥಳ: ನೀರಚಿಲುಮೆ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಮತ್ತು ಚಾಲಕ ಅಪಾಯದಿಂದ ಪಾರಾದ ಘಟನೆ ಸೆ.22ರಂದು ಬೆಳಗ್ಗೆ ನಡೆದಿದೆ.

ಕಾರ್ಮಿಕ ಮುಖಂಡರಾದ ನ್ಯಾಯವಾದಿ ಬಿ.ಎಂ. ಭಟ್ ಅವರ ಕಾರು ಅಪಘಾತಕ್ಕೆ ಒಳಗಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.

ಬೆಳಿಗ್ಗೆ ಬೆಳ್ತಂಗಡಿಯ ತಮ್ಮ ಕಚೇರಿಗೆ ಬರುತ್ತಿರುವ ಸಮಯ ನೀರಚಿಲುಮೆ ಬಳಿ ಕಾರು ಭಟ್ ಅವರ ನಿಯಂತ್ರಣವನ್ನು ಕಳೆದುಕೊಂಡು ರಸ್ತೆಯ ಎಡಬದಿಗೆ ಚಲಿಸಿದ್ದು, ಕೂಡಲೇ ಅವರು ಕಾರನ್ನು ಬಲಬದಿಗೆ ತಿರುಗಿಸಿದಾಗ ಕಾರು ಬಲಬದಿಯ ರಸ್ತೆ ಚರಂಡಿಗೆ ಬಿದ್ದಿದೆ. ಕಾರಿನ ಎದುರು ಭಾಗ ಜಖಂಗೊಂಡಿದ್ದು, ಬಿ.ಎಂ ಭಟ್ ಅವರು ಅಪಾಯದಿಂದ ಪಾರಾಗಿದ್ದಾರೆ.ಬೆಳಗ್ಗಿನ ವೇಳೆ ಈ ರಸ್ತೆಯಲ್ಲಿ ವಾಹನಗಳ ಓಡಾಟ ಅಧಿಕವಿದ್ದು, ಇವರ ಕಾರು ಅಪಘಾತವಾಗುವ ವೇಳೆ ಎದುರಿನಿಂದ ಯಾವುದೇ ವಾಹನ ಬಾರದಿರುವುದರಿಂದ ಸಂಭವೀನಿಯ ಅಪಘಾತ ತಪ್ಪಿದೆ.

Exit mobile version