Site icon Suddi Belthangady

ಬಳಂಜ ಬದಿನಡೆ ಕ್ಷೇತ್ರದಲ್ಲಿ ಐದನೇ ವರ್ಷದ ಶ್ರೀ ಸಿದ್ಧಿ ಗಣಪತಿ ಆರಾಧನೆ

ಬಳಂಜ: ಶ್ರೀ ಶಾಸ್ತಾರ ನಾಗ ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬದಿನಡೆ ಇಲ್ಲಿ ಐದನೇ ವರ್ಷದ ಶ್ರೀ ಸಿದ್ದಿ ಗಣಪತಿಯ ಆರಾಧನಾ ಕಾರ್ಯಕ್ರಮವು ಊರ ಪರವೂರ ಭಕ್ತಾದಿಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಧರ್ಮದರ್ಶಿಗಳಾದ ಜಯ ಸಾಲಿಯಾನ್ ರವರ ಮಾರ್ಗದರ್ಶನದಲ್ಲಿ ನೆರವೇರಿತು.

ಬೆಳಿಗ್ಗೆ ಮೂರ್ತಿ ಪ್ರತಿಷ್ಠೆ, ಗಣಪತಿ ಹೋಮ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.ಸಂಜೆ ಭಜನಾ ಕಾರ್ಯಕ್ರಮ ನಡೆದು ಫಲ್ಗುಣಿ ನದಿಯಲ್ಲಿ ಮೂರ್ತಿ ವಿಸರ್ಜನೆ ಮಾಡಲಾಯಿತು.ಕ್ಷೇತ್ರಕ್ಕೆ ಆಗಮಿಸಿದ ಭಕ್ತಾದಿಗಳನ್ನು ಜಯ ಸಾಲಿಯಾನ್ ಮಂಜುಳಾ ದಂಪತಿಗಳು ಸ್ವಾಗತಿಸಿದರು.

Exit mobile version