Site icon Suddi Belthangady

ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಹೋಮ ಮತ್ತು ಭತ್ತದ ತೆನೆ ಪೂಜೆ

ಕಳೆಂಜ: ಸದಾಶಿವೇಶ್ವರ ದೇವರ ಸನ್ನಿದಿಯಲ್ಲಿ 6 ತೆಂಗಿನ ಕಾಯಿ ಗಣ ಹೋಮ ಮತ್ತು ಭತ್ತದ ತೆನೆಗೆ ವಿಶೇಷ ಪೂಜೆಯನ್ನು ಕ್ಷೇತ್ರದ ಅರ್ಚಕರು ನೆರವೇರಿಸಿದರು.ಬಂದಿರುವಂತ ಎಲ್ಲಾ ಭಕ್ತರಿಗೂ ಮಧ್ಯಾಹ್ನವರೆಗೆ ಭತ್ತದ ತೆನೆ ವಿತರಿಸಲಾಯಿತು.

ಕಾಸರಗೋಡು, ಸುಳ್ಯ, ಹಾಗೆ ಜಿಲ್ಲೆಯ ವಿವಿಧ ದೇವಸ್ಥಾನ, ದೈವಸ್ಥಾನ, ಗ್ರಾಮ ಚಾವಡಿಯ ಮುಖ್ಯಸ್ಥರುಗಳು ಆಗಮಿಸಿ ಭತ್ತದ ತೆನೆ ಪಡೆದುಕೊಂಡರು.

ಬಂದಿರುವಂತಹ ಎಲ್ಲಾ ಭಕ್ತರಿಗೂ ಮಧ್ಯಾಹ್ನ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಈ ಸಂಧರ್ಭದಲ್ಲಿ ಆಗಮಿಸಿದ ಎಲ್ಲಾ ಭಕ್ತರನ್ನು ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರಾದ ಕೆ ಶ್ರೀಧರ್ ರಾವ್ ಮತ್ತು ಇತರ ಸಮಿತಿ ಪದಾಧಿಕಾರಿಗಳು ಸ್ವಾಗತಿಸಿದರು.

Exit mobile version