Site icon Suddi Belthangady

ಗುರುವಾಯನಕೆರೆ: ಕರ್ನಾಟಕ ಗ್ಲಾಸ್ ಮತ್ತು ಪ್ಲೈವುಡ್ ಅಂಗಡಿಗೆ ಖಾಝಿ ಕೂರ ತಂಗಳ್ ಭೇಟಿ

ಗುರುವಾಯನಕೆರೆ: ಸೆ.15ರಂದು ಗುರುವಾಯನಕೆರೆಯ ಸಮುದಾಯ ಭವನದಲ್ಲಿ ನಡೆದ ತಾಜುಲ್ ಉಲಮಾರವರ ಹೆಸರಿನಲ್ಲಿ ನಡೆಯಲಿರುವ ಹತ್ತನೇ ಊರೂಸ್ ಪ್ರಯುಕ್ತ ವಿಶೇಷ ಪ್ರಚಾರ ಸಮಾವೇಶದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಬಹು. ಖುರ್ರತುಸ್ಸಾದಾತ್ ಅಸ್ಸಯ್ಯಿದ್ ಫಝಲ್ ಕೋಯಮ್ಮ ಕೂರ ತಂಗಳ್ ಹಾಗೂ ಸಹಾಯಕ ಖಾಝಿ ಬಹು.ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಗಳ್ ರವರು ಭಾಗವಹಿಸಿ, ಮಾಹಿತಿ ನೀಡಿದರು.

ಕಾರ್ಯಕ್ರಮ ಮುಗಿದು ಹಿಂದಿರುಗುವಾಗ ಬಹು, ಕೂರ ತಂಗಳ್ ಹಾಗೂ ಸಹಾಯಕ ಖಾಝಿ ಬಹು, ಸಾದಾತ್ ತಂಗಳ್ ರವರು ಬೆಳಾಲು ಅನ್ಸಾರಿಯ ಜುಮ್ಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶರೀಫ್ ಬೆಳಾಲು ಹಾಗೂ ಅವರ ಸಹೋದರ ಹೈದರ್ ಬೆಳಾಲು ರವರ ಮಾಲಕತ್ವದ ಗುರುವಾಯನಕೆರೆಯ ಕರ್ನಾಟಕ ಗ್ಲಾಸ್ ಮತ್ತು ಪ್ಲೈವುಡ್ ಸಂಸ್ಥೆಗೆ ಭೇಟಿ ನೀಡಿ, ದುವಾ ನೆರವೇರಿಸುವ ಮೂಲಕ ಸಹೋದರರಿಗೆ ವ್ಯವಹಾರದಲ್ಲಿ ಅಭಿವೃದ್ಧಿಯಾಗಲೆಂದು ಶುಭ ಹಾರೈಸಿದರು.

ಮಹಮ್ಮದ್ ಶರೀಫ್, ಹೈದರ್ ಹಾಗೂ ಗುರುವಾಯನಕೆರೆ ದರ್ಗಾ ಸಮಿತಿ ಕಾರ್ಯದರ್ಶಿ ಉಮರ್ ಮಟ್ಟನ್ ರವರು ಬಹುಮಾನ್ಯರನ್ನು ಗೌರವಪೂರ್ವಕವಾಗಿ ಆದರಿಸಿ ಸ್ವಾಗತಿಸಿದರು.

Exit mobile version