Site icon Suddi Belthangady

ಬೆಳ್ತಂಗಡಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 62ನೇ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನ 2022-23ನೇ ಸಾಲಿನ 62ನೇ ವಾರ್ಷಿಕ ಮಹಾಸಭೆ ಸೆ.16ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬ್ಯಾಂಕಿನ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಳೆಯವರ ಅಧ್ಯಕ್ಷತೆಯಲ್ಲಿ ಜರಗಿತು.

ಬ್ಯಾಂಕಿನ ಹಿರಿಯ ಸದಸ್ಯರಾದ ವಿನಯಚಂದ್ರ ಗೌಡ, ಮುಕುಂದ ಸುವರ್ಣ, ವೆಂಕಟ್ರಮಣ ಭಟ್ ಪೆಲಪ್ಪಾರ್, ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ದೀಪ ಬೆಳಗಿಸಿ ಉದ್ಘಾಟಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ವಾಮನ ಗೌಡ, ನಿರ್ದೇಶಕರುಗಳಾದ ಎಂ. ಈಶ್ವರ ಭಟ್, ಶುಭಕರ ಪೂಜಾರಿ, ಕರಿಯ ನಾಯ್ಕ, ಶ್ರೀಧರ ಕೆ., ವಾಮನ ಬಾಳಿಗ, ಶ್ರೀಮತಿ ವಿಜಯ, ಸಂತೋಷ ಕುಮಾರ್, ಲೋಕಯ್ಯ ಗೌಡ, ಶಂಕರ ವಿಠ್ಠಲ ಎನ್., ಶ್ರೀಮತಿ ಶೀಲಾ, ದಿನೇಶ್, ಉಪಸ್ಥಿತರಿದ್ದರು.ಬ್ಯಾಂಕಿನ ಸದಸ್ಯರು ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷ, ನಿರ್ದೇಶಕರುಗಳು ಹಾಜರಿದ್ದರು.

ಪ್ರಭಾರ ವ್ಯವಸ್ಥಾಪಕ ಕೆ. ಗಿರಿಧರ ಮಹಾಸಭೆಯ ನಡವಳಿಕೆಗನ್ನು, ವಾರ್ಷಿಕ ವರದಿಯನ್ನು ಓದಿದರು.ಸಿಬ್ಬಂದಿಗಳು ಸಹಕರಿಸಿದರು.

Exit mobile version