Site icon Suddi Belthangady

ವೇಣೂರಿನ ವಿದ್ಯೋಧಯ ಪ್ರಾ. ಶಾಲಾ ನಿವೃತ್ತ ದೈಹಿಕ ಶಿಕ್ಷಕ ರತ್ನಾಕರ್ ಶೇರುಗಾರರಿಗೆ ಸನ್ಮಾನ

ಪೆರಿಂಜೆ: ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಪಡ್ದಂದಡ್ಕದಲ್ಲಿ ನಡೆದ ಬಜಿರೆ ಕ್ರೀಡಾ ವಲಯ ಪ್ರಾಥಮಿಕ ಶಾಲಾ ವಿಭಾಗ ಮಟ್ಟದ ಬಾಲಕ ಮತ್ತು ಬಾಲಕಿಯರ ತ್ರೋಬಾಲ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿವೃತ್ತ ರತ್ನಾಕರ್ ಶೇರುಗಾರರನ್ನು ಹೊಸಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ಹೆಗ್ಡೆ ಶಾಲು ಹೊದಿಸಿ ,ಫಲಪುಷ್ಪ ನೀಡಿ ಸನ್ಮಾನಿಸಿದರು.

ರತ್ನಾಕರ್ ಶೇರುಗಾರ ವೇಣೂರು ವಿದ್ಯೋಧಯ ಪ್ರಾಥಮಿಕ ಶಾಲೆಯಲ್ಲಿ 30ವರ್ಷ4ತಿಂಗಳು ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಇತೀಚೆಗೆ ಸೇವಾ ನಿವೃತ್ತಿಯಾಗಿದ್ದಾರೆ.2014 ರಲ್ಲಿ ದಕ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆಗಳ ಜಿಲ್ಲಾ ಮಟ್ಟದ ಅತ್ಯುತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ.ಯೋಗದಲ್ಲಿ ರಾಜ್ಯಮಟ್ಟದ ತರಬೇತುದಾರರಾಗಿದ್ದು ಸ್ವರ್ಣಪದಕ ವಿಜೇತ ಶಿಕ್ಷಕರಾಗಿದ್ದಾರೆ.

ಈ ಸಂದರ್ಭದಲ್ಲಿ ಆರತಿ ಸಮೂಹ ಸಂಪನ್ಮೂಲ ವ್ಯಕ್ತಿ ಪಡ್ದಂದಡ್ಕ-ನಿಟ್ಟಡೆ , ರಾಜೇಶ್ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕೋಶಾಧಿಕಾರಿ, ವಿದ್ಯಾವತಿ, ವಲಯ ಮಟ್ಟದ ನೋಡಲ್ ಅಧಿಕಾರಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶಬ್ಬೀರ್ ಪಿಎಸ್ ಪಡ್ದಂದಡ್ಕ, ನೂರುಲ್ ಹುಧಾ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ, ಕಮಲಮ್ಮ,ಮುಖ್ಯೋಪಾಧ್ಯಾಯಿನಿ ದ ಕ ಜಿಲ್ಲಾ ಪಂಚಾಯತ್ ಪ್ರಾಥಮಿಕ ಶಾಲೆ ಪಡ್ದಂದಡ್ಕ, ಜಗದೀಶ್ ಎಚ್. (BIERT ), ವಲಯದ ದೈಹಿಕ ಶಿಕ್ಷಕರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು.

Exit mobile version