Site icon Suddi Belthangady

ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಮಾಧವ ಗೌಡ, ಉಪಾಧ್ಯಕ್ಷರಾಗಿ ಜಿನೇಶ್ ಕೆ.ಬಿ.ಜೈನ್

ಬೆಳಾಲು: ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಮಾಧವ ಗೌಡ ಓಣಾಜೆ ಮತ್ತು ಉಪಾಧ್ಯಕ್ಷರಾಗಿ ಜಿನೇಶ್ ಕೆ.ವಿ.ಜೈನ್ ಆಯ್ಕೆಯಾದರು.

ಸೆ.11 ರಂದು ನಡೆದ ನೂತನ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.ನಿರ್ದೇಶಕರುಗಳಾದ ಜಾರಪ್ಪ ಗೌಡ ಅರಣೆಮಾರು, ನಾರಾಯಣ ಪರ್ಲತ್ತಾಯ ಕುದ್ರಾಲು, ಪ್ರಭಾಕರ ಗೌಡ ಮಾರ್ಪಾಲು, ಬೊಮ್ಮಣ್ಣ ಗೌಡ ಗುಂಡಿಗದ್ದೆ, ಯಶವಂತ ಬಿ.ಟಿ.ಬನಂದೂರು, ಶೀನಪ್ಪ ಗೌಡ ಹುಣ್ಸೆದಡಿ, ಜಯ ನಾಯ್ಕ, ರೋಹಿತಾಕ್ಷ ಆಚಾರ್ಯ, ವೇದಾವತಿ ಪರಾರಿ, ಬಾಲಕಿ ಯಾನೆ ಶೀಲಾ ಬಿ.ಎಸ್, ಸುಂದರ ಮುಗೇರ ಹಾಜರಿದ್ದರು.

ಚುನಾವಣಾಧಿಕಾರಿಯಾಗಿ ದ.ಕ.ಜಿಲ್ಲಾ ಸಹಕಾರ ಸಂಘಗಳ ಕಚೇರಿಯ ಪ್ರ.ದ.ಸಹಾಯಕ ವಿಲಾಸ್ ಪ್ರಕ್ರಿಯೆ ನಡೆಸಿದರು.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.

Exit mobile version