Site icon Suddi Belthangady

ಎಲ್.ಐ.ಸಿ 67ನೇ ವಿಮಾ ಸಪ್ತಾಹದಲ್ಲಿ ಬೆಳ್ತಂಗಡಿ ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಶಾಲೆಗೆ ಹಲವಾರು ಪ್ರಶಸ್ತಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ವಿದ್ಯಾರ್ಥಿಗಳು ಬೆಳ್ತಂಗಡಿಯಲ್ಲಿ ನಡೆದ ಎಲ್ ಐ ಸಿ 67ನೇ ವಿಮಾ ಸಪ್ತಾಹದಲ್ಲಿ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಭಾವಗೀತೆಯಲ್ಲಿ ಹತ್ತನೇ ತರಗತಿಯ ಚಿನ್ಮಯ್ ಜಿ. ಕೆ. ಪ್ರಥಮ , ಸಹನ ಆಚಾರ್ಯ ಎಂಟನೇ ತರಗತಿ ದ್ವಿತೀಯ ಬಹುಮಾನ ಪಡೆದುಕೊಂಡಿರುತ್ತಾರೆ.

ಚಿತ್ರಕಲಾ ಸ್ಪರ್ಧೆಯಲ್ಲಿ ಹಿರಿಯ ಪ್ರಾರ್ಥಮಿಕ ವಿಭಾಗದಲ್ಲಿ ಏಳನೇ ತರಗತಿಯ ಬೃಂದಾ ಪ್ರಥಮ ಪಡೆದಿದ್ದು, ರಿತಿಕಾ ಶೆಣೈ ಚತುರ್ಥ, ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಉನ್ನತಿ ಎಸ್. ಚತುರ್ಥ ಬಹುಮಾನ ಪಡೆದಿರುತ್ತಾರೆ.

ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದರು.

Exit mobile version