Site icon Suddi Belthangady

ಶಿಶಿಲದಲ್ಲಿ ಆನೆ ದಾಳಿ ಬಗ್ಗೆ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ ಕಾರ್ಯಾಗಾರ

ಶಿಶಿಲ: ಅರಣ್ಯ ಇಲಾಖೆಯ ವತಿಯಿಂದ ಶಿಶಿಲ ಗ್ರಾ.ಪಂ.ಸಭಾಂಗಣದಲ್ಲಿ ಆನೆ ಸಮಸ್ಯೆ ಮತ್ತು ಆನೆ ದಾಳಿ ಸಂದರ್ಭದಲ್ಲಿ ಗ್ರಾಮಸ್ಥರು ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವನ್ಯಜೀವಿ ತಜ್ಞ ರಿಂದ ಮಾಹಿತಿ ಕಾರ್ಯಗಾರ ವನ್ನು ಸೆ.7 ರಂದು ನಡೆಯಿತು.

ಈ ಸಂದರ್ಭದಲ್ಲಿ ಶಿಶಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಸುದಿನ್ .ಡಿ ಹಾಗೂ ಪೊಳಿಪು ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಪದ್ಮನಾಭ್, ಉಪವಲಯ ಅರಣ್ಯಾಧಿಕಾರಿಗಳಾದ ಪ್ರಶಾಂತ್, ಸಂತೋಷ್, ಧೀರಜ್ ಹಾಗೂ ಗಸ್ತು ವನಪಾಲಕರದ ಸನತ್ ರೈ, ರಾಜೇಶ್, ನಿಂಗಪ್ಪ ,ಸುನಿಲ್ ನಾಯ್ಕ ಹಾಗೂ ಅರಣ್ಯ ವೀಕ್ಷಕ ವಿನಯ್ ಹಾಗೂ ಶಿಶಿಲ ಗ್ರಾಮಸ್ಥರು ಉಪಸ್ಥಿತರಿದ್ದರು.

Exit mobile version