Site icon Suddi Belthangady

ಬೆಳ್ತಂಗಡಿಯಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪಿಡಬ್ಲ್ಯುಡಿ ಚಾಲಕ-ಹಲವು ವಾಹನಗಳಿಗೆ ಡಿಕ್ಕಿ-ಬೈಕ್ ಚಾಲಕನಿಗೆ ಗಾಯ

ಬೆಳ್ತಂಗಡಿ: ಲೋಕೋಪಯೋಗಿ ಇಲಾಖೆಯ ವಾಹನ ಚಾಲಕ ಉಮೇಶ್ ಎಂಬವರು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ಬೆಳ್ತಂಗಡಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ.

ಬೈಕ್, ರಿಕ್ಷಾ, ಕಾರುಗಳಿಗೆ ಲೋಕೋಪಯೋಗಿ ಇಲಾಖೆಯ ಚಾಲಕ ಉಮೇಶ್ ಚಲಾಯಿಸುತ್ತಿದ್ದ ಕಾರು ಡಿಕ್ಕಿಯಾಗಿದೆ.

ಇವರಲ್ಲಿ ಬೈಕ್ ಸವಾರರೊಬ್ಬರಿಗೆ ಕಾಲಿಗೆ ತೀವ್ರ ಗಾಯವಾಗಿದ್ದಾಗಿ ತಿಳಿದುಬಂದಿದೆ.ಉಳಿದಂತೆ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿದ್ದು, ಕುಡಿದ ಚಾಲಕನನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯಲಾಗಿದೆ.

Exit mobile version