Site icon Suddi Belthangady

ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ-ಸಹಕಾರ ಭಾರತಿ ಬೆಂಬಲಿತ ಎಲ್ಲಾ 13 ನಿರ್ದೇಶಕರು ಆಯ್ಕೆ

ಬೆಳಾಲು : ಬೆಳಾಲು ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ಸೆ.3 ರಂದು ನಡೆದ ಚುನಾವಣೆಯಲ್ಲಿ ಎಲ್ಲಾ 13 ಸ್ಥಾನಗಳಿಗಳಿಗೆ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಚುನಾಯಿತರಾಗಿದ್ದಾರೆ.

ಸಾಮಾನ್ಯ 7 ಸ್ಥಾನಕ್ಕೆ ಜಾರಪ್ಪ ಗೌಡ ಅರಣೆಮಾರು, ನಾರಾಯಣ ಪರ್ಲತ್ತಾಯ ಕುದ್ರಾಲು, ಪ್ರಭಾಕರ ಗೌಡ ಮಾರ್ಪಲು, ಬೊಮ್ಮಣ್ಣ ಗೌಡ ಗುಂಡಿಗದ್ದೆ , ಮಾಧವ ಓಣಾಜೆ, ಯಶವಂತ ಬಿ.ಟಿ. ಬನಂದೂರು, ಶೀನಪ್ಪ ಗೌಡ ಹುಣಸೆದಡಿ, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಜಯ ನಾಯ್ಕ, ಹಿಂದಿಳಿದ ವರ್ಗ ಎ. ವರ್ಗದಿಂದ ರೋಹಿತಾಕ್ಷ ಆಚಾರ್ಯ, ಹಿಂದುಳಿದ ವರ್ಗ ಬಿ. ವರ್ಗದಿಂದ ಜಿನೇಶ್ ಕೆ.ಬಿ.ಜೈನ್, 2 ಸ್ಥಾನ ಮಹಿಳಾ ಮೀಸಲು ಕ್ಷೇತ್ರದಿಂದ ವೇದಾವತಿ ಪರಾರಿ, ಬಾಲಕಿ ಯಾನೆ ಶೀಲಾವತಿ ಇವರು ಚುನಾವಣೆಯಲ್ಲಿ ಜಯ ಗಳಿಸಿ ಆಯ್ಕೆಯಾದರು.

ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸುಂದರ ಮುಗೇರ ಅವಿರೋಧವಾಗಿ ಆಯ್ಕೆಯಾಗಿದ್ದರು.

ಚುನಾವಣಾಧಿಕಾರಿಯಾಗಿ ದ. ಕ. ಜಿಲ್ಲಾ ಸಹಕಾರ ಸಂಘಗಳ ಕಚೇರಿಯ ಪ್ರ. ದ. ಸಹಾಯಕ ವಿಲಾಸ್ ನಿರ್ವಹಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಕೇಶ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.

Exit mobile version