Site icon Suddi Belthangady

ಕಳೆಂಜದ ಅಮ್ಮಿನಡ್ಕದಲ್ಲಿ ಹದಿನೆಂಟನೇ ವರ್ಷದ ಓಣಂ ಹಬ್ಬದ ಸಂಭ್ರಮ

ಕಳೆಂಜ: ಜ್ಯೋತಿ ಸ್ವಸಹಾಯ ಸಂಘ, ದಿವ್ಯಜೋತಿ ಸ್ವಸಹಾಯ ಸಂಘ, ಕರಾವಳಿ ಸ್ವಸಹಾಯ ಸಂಘ ಮತ್ತು ಓಣಂ ಹಬ್ಬ ಆಚರಣೆ ಸಮಿತಿ ಅಮ್ಮಿನಡ್ಕ ಇವುಗಳ ಜಂಟಿ ಆಶ್ರಯದಲ್ಲಿ 18ನೇ ವರ್ಷದ ಓಣಂ ಹಬ್ಬದ ಆಚರಣೆ ಸಪ್ಟೆಂಬರ್ 2ರಂದು ಅಮ್ಮಿನಡ್ಕದಲ್ಲಿ ನಡೆಯಿತು.

ಉದ್ಘಾಟನೆಯನ್ನು ಗೋಪಾಲ ದೇವಾಡಿಗ ರವರು ನೆರವೇರಿಸಿದರು ಪುರುಷರಿಗೆ ಮಹಿಳೆಯರಿಗೆ ಮತ್ತು ಪುಟಾಣಿ ಮಕ್ಕಳಿಗೆ ವಿಶೇಷ ಹಾಗೂ ವೈವಿಧ್ಯಮಯ ಆಟೊಟ ಸ್ಪರ್ಧೆಗಳನ್ನು ಆಯೋಜಕರು ಏರ್ಪಡಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಜೀವ ಗೌಡ ( ಅಧ್ಯಕ್ಷರು ಓಣಂ ಹಬ್ಬ ಆಚರಣೆ ಸಮಿತಿ) ರವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ವಿಶ್ವನಾಥ್, ಗ್ರಾಮ ಪಂಚಾಯಿತಿನ ಸದಸ್ಯ ನಿತ್ಯಾನಂದ ರೈ, ಓಣಂ ಹಬ್ಬ ಆಚರಣೆ ಸಮಿತಿಯ ಗೌರವಾಧ್ಯಕ್ಷ ಪಿಟಿ ಸಭಾಸ್ಟಿನ್ ಕುದ್ದ, ಅಂಗನವಾಡಿಯ ಕಾರ್ಯಕರ್ತೆ ಲೀಲಾವತಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಹೊನ್ನಪ್ಪ ಗೌಡ ಪುಳ್ಳಾಯ, ಸ್ವಾಗತವನ್ನು ಜೈಸನ್ ಪಟ್ಟೇರಿ, ವಂದನಾರ್ಪಣೆಯನ್ನು ರಾಜೇಶ್ ಪಿ.ಎಸ್ ನೆರವೇರಿಸಿದರು.

Exit mobile version