Site icon Suddi Belthangady

ಕಾಯರ್ತಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ

ಕಾಯರ್ತಡ್ಕ: 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಆ.31ರಂದು ಸಂಘದ ಆವರಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಎಚ್ ವಿಜಯಕುಮಾರ್ (ಸಂಘದ ಅಧ್ಯಕ್ಷರು) ವಹಿಸಿದ್ದರು ದ.ಕ ಹಾಲು ಒಕ್ಕೂಟ ಮಂಗಳೂರು ಇದರ ಬೆಳ್ತಂಗಡಿ ವಿಭಾಗದ ಉಪ ವ್ಯವಸ್ಥಾಪಕರಾದ ಡಾಕ್ಟರ್ ಸತೀಶ್ ರಾವ್ ಅವರು ಹೈನುಗಾರಿಕೆಯ ಬಗ್ಗೆ ಕೂಲಂಕುಶವಾದ ಮಾಹಿತಿ ನೀಡಿದರು.

ವಿಸ್ತರಣಾಧಿಕಾರಿ ಯಮುನಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು ಪಶುವೈದ್ಯಧಿಕಾರಿ ಗಣಪತಿ ಬಿ ಎಂ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ರಾಘವ ಗೌಡ ಬಿ ವರದಿ ಮಂಡಿಸಿದರು.

ವೇದಿಕೆಯಲ್ಲಿ ಉಪಾಧ್ಯಕ್ಷರಾದ ಹೇಮಾವತಿ ನಿರ್ದೇಶಕರುಗಳಾದ ಧನಂಜಯ ಬಿ, ಆನಂದ ಗೌಡ, ಉಮೇಶ್ ಗೌಡ, ಸದಾನಂದ ಯನ್ , ರಾಜೇಂದ್ರ ಕುಮಾರ್, ಶ್ರೀನಿವಾಸ ಗೌಡ, ಸುಂದರ ಗೌಡ, ರಾಜು ಎಚ್, ಅಂಗರ, ಡೀಕಯ್ಯ, ಸೇಸಮ್ಮ ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ಮುಕುಂದ ಕಲ್ಲು ಗುಡ್ಡೆ ಮತ್ತು ಸ್ವಾಗತವನ್ನು ಸಂಘದ ಉಪಾಧ್ಯಕ್ಷರಾದ ಹೇಮಾವತಿ ಹಾಗೂ ವಂದನಾರ್ಪಣೆಯನ್ನು ಸಂಘದ ನಿರ್ದೇಶಕರಾದ ಆನಂದ ಗೌಡ ನೆರವೇರಿಸಿದರು.

ಸಂಘದ ಸದಸ್ಯರಿಗೆ ಉತ್ತಮ ಗುಣಮಟ್ಟದ ಹಾಗೂ ಉತ್ತಮ ಬೆಲೆಯ ನಾನ್ ಸ್ಟಿಕ್ ತವಾ ಉಡುಗೊರೆಯಾಗಿ ನೀಡಿದರು.

Exit mobile version