Site icon Suddi Belthangady

ನಿಡ್ಲೆಯಲ್ಲಿ ಅಗ್ರಿಲೀಫ್ ಎಕ್ಸ್‌ಪೋರ್ಟ್ ಪೈ.ಲಿ. ಇದರ ಉದ್ಘಾಟನಾ ಸಮಾರಂಭ

ನಿಡ್ಲೆ: ಭಾರತ್ ನಂಬರ್ 1 ಹಾಳೆ ತಟ್ಟೆ ರಫ್ತು ಸಂಸ್ಥೆಯಾದ ಅಗ್ರಿಲೀಫ್‌ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ಹೊಸ ಕಾರ್ಖಾನೆಯ ಉದ್ಘಾಟನಾ ಸಮಾರಂಭವು ಆ.28 ರಂದು ನಿಡ್ಲೆ ಬರಂಗಾಯದ ಅಗ್ರಿಲೀಫ್‌ ಸಂಸ್ಥೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವರಾದ ಶರಣಬಸಪ್ಪ ದರ್ಶನಾಪುರವರು ಉದ್ಘಾಟಿಸಿದರು.ಅಧ್ಯಕ್ಷತೆಯನ್ನು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್‌ ಪೂಂಜ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹಷೇಂದ್ರ ಕುಮಾರ್ ಭಾಗವಹಿಸಿದರು.ಗೌರವಾನ್ವಿತ ಅತಿಥಿಗಳಾಗಿ ಮಾಜಿ ಶಾಸಕರು, ವಿಧಾನ ಪರಿಷತ್‌ ಹಾಗೂ ಎಸ್.ಯು.ಸಿ.ಒ ಬ್ಯಾಂಕ್‌ ಲಿ.ಅಧ್ಯಕ್ಷರಾದ ಮನೋಹರ್ ಮಸ್ಕಿ, ವಿಧಾನ ಪರಿಷತ್ ಶಾಸಕರಾದ ಕೆ.ಹರೀಶ್ ಕುಮಾರ್, ಯು.ಎಸ್.ಎ ಯಿಂದ ಆಗಮಿಸಿದ ಗ್ರಾಹಕ ಮೈಕಲ್, ಉಜಿರೆ ಜನಾರ್ಧನ ದೇವಸ್ಥಾನದ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡ್ವೆಟ್ನಾಯ, ಶಶಿ ಕ್ಯಾಟರಿಂಗ್ ಸರ್ವಿಸಸ್ ನ ನಿರ್ದೇಶಕರು ಸ್ಥಾಪಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಶಶಿಧರ ಶೆಟ್ಟಿ, ಎಸ್ ಬಿ ಐ ಡೆಪ್ಯೂಟಿ ಜನರಲ್ ಮ್ಯಾನೇಜರ್ ಜೋಬಿ ಜೋಸ್ ಭಾಗವಹಿಸಿದ್ದರು.ಅಗ್ರಿಲೀಫ್‌ ಎಕ್ಸ್‌ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಇದರ ಸಂಸ್ಥಾಪಕ ಅವಿನಾಶ್ ರಾವ್, ಸಹ ಸಂಸ್ಥಾಪಕ ಅತಿಶಯ್ ಜೈನ್, ಅಗ್ರಿಲೀಫ್‌ ನಿರ್ದೇಶಕರಾದ ರಾಗ್ನಿಶ್ ಇನ್ನಿತರರು ಉಪಸ್ಥಿತರಿದ್ದರು.

Exit mobile version