Site icon Suddi Belthangady

ಯುವವಾಹಿನಿ ಕೇಂದ್ರ ಸಮಿತಿ, ಬೆಳ್ತಂಗಡಿ ಘಟಕ ಗುರುದೇವ ಮಠಕ್ಕೆ ಭೇಟಿ-ಸ್ವಾಮೀಜಿಯಿಂದ ಆಶೀರ್ವಾದ

ಧರ್ಮಸ್ಥಳ : ಶ್ರೀ ರಾಮಕ್ಷೇತ್ರ ಮಹಾ ಸಂಸ್ಥಾನದ ಪೀಠಾಧೀಶ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜೀ ಯವರ 4ನೇ ವರ್ಷದ ಚಾತುರ್ಮಸ್ಯ ವೃತಾಚರಣೆ ಕಾರ್ಯಕ್ರಮದಲ್ಲಿ ಆ.26 ರಂದು ಯುವವಾಹಿನಿ(ರಿ.)ಕೇಂದ್ರ ಸಮಿತಿ ಮಂಗಳೂರು, ಮತ್ತು ಬೆಳ್ತಂಗಡಿ ಘಟಕದ ಪದಾಧಿಕಾರಿಗಳು ಶ್ರೀ ಗುರುದೇವ ಮಠಕ್ಕೆ ಭೇಟಿ ಸ್ವಾಮೀಜಿಯವರಿಂದ ಆಶೀರ್ವಾದ ಪಡೆದರು.

ಕೇಂದ್ರ ಸಮಿತಿಯ ಅಧ್ಯಕ್ಷ ರಾಜೇಶ್. ಬಿ, ಉಪಾಧ್ಯಕ್ಷ ಹರೀಶ್ ಬಳೆಂಜ, ಪ್ರಧಾನ ಕಾರ್ಯದರ್ಶಿ ಕುಸುಮಾಕರ ಕುಂಪಲ, ಜೊತೆ ಕಾರ್ಯದರ್ಶಿ ಸುರೇಶ್ ಪೂಜಾರಿ, ಬೆಳ್ತಂಗಡಿ ಘಟಕ ಪ್ರಧಾನ ಕಾರ್ಯದರ್ಶಿ ಸುನೀಲ್ ಕನ್ಯಾಡಿ,ಕೋಶಾಧಿಕಾರಿ ವಿಜಯ್ ಕುಮಾರ್ ಶಿರ್ಲಾಲ್, ಗೌರವ ಸಲಹೆಗಾರ ರಮಾನಂದ ಮುಂಡೂರು, ಉಪಾಧ್ಯಕ್ಷರಾದ ಸದಾಶಿವ ಊರ, ಮಾಜಿ ಅಧ್ಯಕ್ಷ ಹರೀಶ್ ಸುವರ್ಣ,ಪುರುಷೋತ್ತಮ ಧರ್ಮಸ್ಥಳ, ಗುರುರಾಜ ಗುರಿಪಳ್ಳ,ಇತರ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.

Exit mobile version