Site icon Suddi Belthangady

ಸೌಜನ್ಯ ಹತ್ಯೆಯ ಪ್ರಕರಣವನ್ನು ಮರುತನಿಖೆ ಮಾಡುವಂತೆ ಮೊಗ್ರು ಮತ್ತು ಬಂದಾರು ಗ್ರಾಮದ ಗೌಡ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಮನವಿ

ಬಂದಾರು: ಮೊಗ್ರು ಮತ್ತು ಬಂದಾರು ಗ್ರಾಮದ ಗೌಡ ಯಾನೆ ಒಕ್ಕಲಿಗರ ಸೇವಾ ಸಂಘದ ವತಿಯಿಂದ, ಧರ್ಮಸ್ಥಳ ಪಾಂಗಳ ನಿವಾಸಿ ಸೌಜನ್ಯಹತ್ಯೆಯ ಪ್ರಕರಣವನ್ನು ಮರುತನಿಖೆ ಮಾಡುವಂತೆ ಸರಕಾರವನ್ನು ಒತ್ತಾಯಿಸಲು ಮನವಿ ಪತ್ರವನ್ನು ಬಂದಾರು ಗ್ರಾಮಪಂಚಾಯಿತ್ ನಲ್ಲಿ ಸಮಾಜ ಬಾಂಧವರ ಉಪಸ್ಥಿತಿಯಲ್ಲಿ ಸಲ್ಲಿಸಲಾಯಿತು.

ಈ ಮನವಿ ಪತ್ರ ಸಲ್ಲಿಸುವ ಮುಂಚೆ ಮೊಗ್ರು ಗ್ರಾಮದ ದೈವಸ್ಥಾನವಾದ ಕಾರಣಿಕ ದೈವ ಕ್ಷೇತ್ರ ಮುಗೇರಡ್ಕ ದೈವಸ್ಥಾನದಲ್ಲಿ ಮೊಗ್ರು ಗ್ರಾಮದ ಗೌಡ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಸರ್ವಸದಸ್ಯರ ಸಮ್ಮುಖದಲ್ಲಿ ದೈವ ನಡೆಯಲ್ಲಿ ನಿಜವಾದ ಆರೋಪಿಗಳ ಶೀಘ್ರ ಪತ್ತೆಗೆ ಮತ್ತು ಅವರಿಗೆ ಕಠಿಣ ಶಿಕ್ಷೆ ಕಾನೂನು ನೀಡಲು ವಿಫಲ ಆದರೂ ದೈವಗಳು ಆದರೂ ತಕ್ಕ ಶಿಕ್ಷೆ ನೀಡುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.

ಅಲ್ಲಿಂದ ಮುಂದಕ್ಕೆ ಬಂದಾರು ಮೊಗ್ರು ಗೌಡ ಸಮಾಜ ಬಂಧುಗಳ ಉಪಸ್ಥಿತಿಯಲ್ಲಿ ಪೆಲತಿಮರು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಮತ್ತು ಗ್ರಾಮ ದೈವಸ್ಥಾನವಾದ ಪಾಣೆಕಲ್ಲು ಶಿರಾಡಿ ದೈವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಎಲ್ಲರೂ ಬಂದಾರು ಗ್ರಾಮಪಂಚಾಯತ್ ಗೆ ತೆರಳಿ ಸಂಬಂಧಪಟ್ಟ ಅಧಿಕಾರಿ ವರ್ಗದ ಮೂಲಕ ಸರಕಾರಕ್ಕೆ ಈ ಹತ್ಯೆ ಪ್ರಕರಣವನ್ನು ಮರುತನಿಖೆ ಮಾಡಿ ನೈಜ ಆರೋಪಿಗಳ ಪತ್ತೆ ಮಾಡಿ ಕಠಿಣ ಶಿಕ್ಷೆ ನೀಡಿ ಇವಾಗ ಹಿಂದೂ ಸಮಾಜದಲ್ಲಿ ಇರುವ ಗೊಂದಲ ನಿವಾರಣೆ ಮಾಡಿ ಶಾಂತಿಯುತ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ವಿನಂತಿ ಮಾಡಲಾಯಿತು.

Exit mobile version