Site icon Suddi Belthangady

ಲಯನ್ಸ್ ಕ್ಲಬ್ ವತಿಯಿಂದ ಸರ್ವಧರ್ಮೀಯ ಮುಂಡಾಜೆಯ ಮೂರು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಬೆಳ್ತಂಗಡಿ ಇದರ ಸುವರ್ಣ ಮಹೋತ್ಸವ ವರ್ಷದ ಅಂಗವಾಗಿ ಸದಸ್ಯರ ಮನೆ ಭೇಟಿ ಮತ್ತು ಮನೆಯಂಗಳದಲ್ಲೇ ಸ್ಥಳೀಯ ಸೇವಾ ಚಟುವಟಿಕೆಯ ಅನಾವರಣ ಅಂಗವಾಗಿ ಮುಂಡಾಜೆಯಲ್ಲಿ ಬುಧವಾರ ಸರ್ವಧರ್ಮೀಯ ಮೂರು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ ನಡೆಯಿತು.

ಲಯನ್ಸ್ ಕ್ಲಬ್ ಸದಸ್ಯ, ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರ ಮನೆಯಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಗ್ರಾಮದ ಅರ್ಹ ಹಿಂದು, ಮುಸ್ಲಿಂ ಮತ್ತು ಕ್ರೈಸ್ತ ಕುಟುಂಬಗಳಿಗೆ ಇಸ್ಮಾಯಿಲ್ ಗಾಂಧಿನಗರ ಅವರ ಪ್ರಾಯೋಜಕತ್ವದಲ್ಲಿ ಆಹಾರದ ಕಿಟ್ ವಿತರಿಸಲಾಯಿತು.

ಈ ವೇಳೆ ಲಯನ್ಸ್ ಕ್ಲಬ್ ಸದಸ್ಯರಾದ ನಾಮದೇವ ರಾವ್ ಮತ್ತು ಪುರುಷೋತ್ತಮ ಶೆಟ್ಟಿ ಅಗರಿ, ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಪದಾಧಿಕಾರಿಗಳಾದ ಶಿಶಿಧರ ಠೋಸರ್ ಮತ್ತು ಕೃಣ್ಣಪ್ಪ ಉಪಸ್ಥಿತರಿದ್ದರು.

Exit mobile version