Site icon Suddi Belthangady

ರೇಷ್ಮೆರೋಡ್‌ನಲ್ಲಿ ಬೊಲೆರೋ-ಬೈಕ್ ನಡುವೆ ಅಪಘಾತ: ಗಾಯಗೊಂಡಿದ್ದ ಪಣೆಜಾಲು ನಿವಾಸಿ ಪ್ರಮೋದ್ ಶೆಟ್ಟಿ ಮೃತ್ಯು

ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ರೇಷ್ಮೆರೋಡ್ ಬಳಿ ಮಹೀಂದ್ರ ಬೊಲೆರೋ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡಿದ್ದ ಪಣೆಜಾಲು ನಿವಾಸಿ ಪ್ರಮೋದ್ ಶೆಟ್ಟಿ(45ವ)ರವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಆ.17ರಂದು ಸಂಜೆ ಗೇರುಕಟ್ಟೆಯಿಂದ ಗುರುವಾಯನಕೆರೆ ಕಡೆಗೆ ಹೋಗುವ ಮಾರ್ಗದ ಕಳಿಯ ಗ್ರಾಮದ ರೇಷ್ಮೆರೋಡ್ ಬಳಿ ಗುರುವಾಯನಕೆರೆ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಹೋಗುವ ಬೊಲೆರೋ ವಾಹನಕ್ಕೆ ಎದುರಿನಿಂದ ಬರುತ್ತಿದ್ದ ನೋಂದಣಿಯಾಗದ ಹೊಸ ಬೈಕ್ ಡಿಕ್ಕಿಯಾಗಿತ್ತು.ಅಪಘಾತದಲ್ಲಿ ಬೈಕ್ ಸವಾರರಾಗಿದ್ದ ಪಣೆಜಾಲು ಅಮರ್‌ಜಾಲು ನಿವಾಸಿ ಶಿವ ಮತ್ತು ಹಿಂಬದಿ ಸವಾರರಾಗಿದ್ದ ಪಣೆಜಾಲು ನಿವಾಸಿ, ಗಾರೆ ಕೆಲಸ ಮಾಡುತ್ತಿದ್ದ ಪ್ರಮೋದ್ ಶೆಟ್ಟಿ ಗಂಭೀರ ಗಾಯಗೊಂಡಿದ್ದರು.ಈ ಪೈಕಿ ಶಿವರವರು ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪ್ರಮೋದ್ ಶೆಟ್ಟಿ ಅವರು ಆ.19ರಂದು ಮೃತಪಟ್ಟಿದ್ದಾರೆ.

ಅಪಘಾತದಿಂದಾಗಿ ಬೊಲೆರೋ ವಾಹನದ ಬಲಭಾಗ ಜಖಂಗೊಂಡಿದೆ.ಬೊಲೆರೋ ಚಲಾಯಿಸುತ್ತಿದ್ದ ಉರುವಾಲು ಗ್ರಾಮದ ಸಂತೋಷ್ (30ವ)ರವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 87/2023ರಂತೆ ಕಲಂ 279, 337, 338ರಡಿ ಪ್ರಕರಣ ದಾಖಲಾಗಿದೆ.

ಮೃತರು ಪತ್ನಿ ಗೀತಾ, ಮಕ್ಕಳಾದ ಸಂಕೇತ್ ಮತ್ತು ತೇಜಸ್ವಿನಿಯವರನ್ನು ಅಗಲಿದ್ದಾರೆ.

Exit mobile version