Site icon Suddi Belthangady

ಬೆಳಾಲು ಅನ್ಸಾರುಲ್ ಇಸ್ಲಾಂ ಮದ್ರಸಾ- ಸ್ವಾತಂತ್ರ್ಯೋತ್ಸವ ಆಚರಣೆ

ಬೆಳಾಲು: ಅನ್ಸಾರುಲ್ ಇಸ್ಲಾಂ ಮದ್ರಸಾ ಬೆಳಾಲಿನಲ್ಲಿ ವಿಜ್ರಂಭಣೆ ಯ 77 ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಿಲಾಯಿತು.ಅಧ್ಯಕ್ಷರಾದ ಆದಂ ಟಿ.ಎಚ್ ರವರು ದ್ವಜಾರೋಹಣ ಕಾರ್ಯಕ್ರಮ ನಡೆಸಿದರು.

ಖತೀಬರಾದ ಬದ್ರುದ್ದೀನ್ ಸಖಾಫಿ ಉಸ್ತಾದರು ದುಆ ನೆರವೇರಿಸಿದರು.ಪ್ರಧಾನ ಕಾರ್ಯದಶಿ ಮಹಮ್ಮದ್ ಶರೀಪ್ ಬೆಳಾಲು ಸ್ವಾಗತಿಸಿದರು.

ಸದರ್ ಉಸ್ತಾದರಾದ ಅಯ್ಯೂಬ್ ಮಹ್ಳರೀ ರವರು ಸಂದೇಶ ಭಾಷಣ ಮಾಡಿ, ಮಕ್ಕಳಿಗೆ ಏರ್ಪಡಿಸಿದ ಕಾರ್ಯಕ್ರಮದ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ಜಮಾತ್ ಕಮಿಟಿಯ ಉಪಾಧ್ಯಕ್ಷರಾದ ಮಹಮ್ಮದ್ ಗನಕುಲಗುಡ್ಡೆ, ಉಸ್ಮಾನ್ ಸೊಸೈಟಿ ಮತ್ತು ಜೊತೆ ಕಾರ್ಯದರ್ಶಿ ಮೊಯಿದು ಮುಂಡೆತ್ಯಾರು ಹಾಗೂ ಮದರಸ ಉಸ್ತುವಾರಿಗಳಾದ ಹಮೀದ್ ಗೊಳಿದೊಟ್ಟು ಮತ್ತು ಹಂಝ ಬೊಟ್ಟು ಉಪಸ್ಥಿತಿ ಇದ್ದು, ಸುಲೈಮಾನ್ ಬೀಮಂಡೆ ರವರು ನಿರೂಪಣೆ ಮಾಡಿ, ಕೊನೆಗೆ ಧನ್ಯವಾದ ಮಾಡಿದರು.

ಸೇರಿದ ಎಲ್ಲಾರಿಗೂ ಲಘು ಉಪಹಾರ ನೀಡಿ, ಸಲಾತ್ ನೊಂದಿಗೆ ಕೊನೆಗೊಂಡಿತು

Exit mobile version