Site icon Suddi Belthangady

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೊಕ್ಕಡದಲ್ಲಿ ಪಂಜಿನ ಮೆರವಣಿಗೆ

ಕೊಕ್ಕಡ: ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಕೊಕ್ಕಡದಲ್ಲಿ ಪಂಜಿನ ಮೆರವಣಿಗೆಯನ್ನು ಹಿಂದೂ ಜಾಗರಣ ವೇದಿಕೆ ಕೊಕ್ಕಡ ವಲಯ ಇದರ ವತಿಯಿಂದ ಆ.14ರಂದು ನಡೆಸಿದರು.

ಕೊಕ್ಕಡ ಜಂಕ್ಷನ್ನಿಂದ ರಥಬೀದಿ ಮೂಲಕ ಶ್ರೀ ರಾಮ ಭಜನಾಮಂದಿರದವರೆಗೆ ಪಂಜಿನ ಮೆರವಣಿಗೆ ನಡೆಸಿದರು.ಕೊಕ್ಕಡ ಸುತ್ತಮುತ್ತಲಿನ ಅನೇಕ ಕಾರ್ಯಕರ್ತರು ಮೆರವಣಿಗೆಗೆ ಸಾಕ್ಷಿಯಾದರು.ತದನಂತರ ನಡೆದ ಸಭಕಾರ್ಯಕ್ರಮದಲ್ಲಿ ಮಹಾಬಲ.ಕೆ ನಿವೃತ ಯೋಧರು ಅಧ್ಯಕ್ಷತೆ ವಹಿಸಿದ್ದರು.

ಹರೀಶ್ ವಕೀಲರು, ಹಿಂ.ಜಾ.ವೇ ಪ್ರಾಂತ ಸಮಿತಿ ಸದಸ್ಯರು, ಮಂಗಳೂರು ದಿಕ್ಸೂಚಿ ಭಾಷಣ ಮಾಡಿದರು.ವಿನಯ್ ಕೇಚೋಡಿ, ಅಧ್ಯಕ್ಷರು ಹಿಂ.ಜಾ.ವೇ ಕೊಕ್ಕಡ ವಲಯ, ಪ್ರಶಾಂತ್ ವಿ.ಹೆಚ್.ಪಿ, ಭಜರಂಗದಳ ಬೆಳ್ತಂಗಡಿ ಪ್ರಖಂಡ ಉಪಸ್ಥಿತರಿದ್ದರು.

ಜಯಚಂದ್ರ ಬಲ್ಕಾಜೆ ಸಂಘದ ಗೀತೆ ಹಾಡಿದರು.ಕೇಶವ ಗೌಡ ಕಾರ್ಯಕ್ರಮ ನಿರೂಪಿಸಿದರು.

Exit mobile version