Site icon Suddi Belthangady

ಉಜಿರೆಯ ವ್ಯಾಯಮ್ ಮಲ್ಟಿ ಜಿಮ್ ನಲ್ಲಿ ಸ್ವಾತಂತ್ರೋತ್ಸವ, ಸನ್ಮಾನ, ವಿವಿಧ ಸ್ಪರ್ಧೆ

ಉಜಿರೆ: ಕಾಲೇಜು ರಸ್ತೆಯ ಮಲ್ಲಿಕಾರ್ಜುನ ಸಂಕೀರ್ಣದಲ್ಲಿರುವ ವ್ಯಾಯಾಮ್ ಮಲ್ಟಿ ಜಿಮ್ ನಲ್ಲಿ 77 ನೇ ಸ್ವಾತಂತ್ರೋತ್ಸವದ ವಿವಿಧ ಕಾರ್ಯಕ್ರಮದೊಂದಿಗೆ ಜರಗಿತು.

ನಿವೃತ್ತ ಯೋಧ ಸುಧಾಕರ್ ರವರನ್ನು ಬೆಳ್ತಂಗಡಿಯ ಹಿರಿಯ ವಕೀಲ ಬಿ. ಕೆ.ಧನಂಜಯ್ ರಾವ್, ನಿವೃತ್ತ ಯೋಧ ಯತೀಂದ್ರ, ಎಲ್ಐಸಿ ಅಧಿಕಾರಿ ರಘುಚಂದ್ರ.ಟಿ.ಜಿ. ಅವರ ಸಮ್ಮುಖದಲ್ಲಿ ಸನ್ಮಾನಿಲಾಯಿತು.

ನಂತರ ಹಗ್ಗಜಗ್ಗಾಟ, ಡೆಡ್ಲಿಫ್ಟ್, ಸ್ಕ್ವೆಟ್, ಬೆಂಚ್ ಪ್ರೆಸ್ ಮತ್ತು ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಇದರಲ್ಲಿ ಋತುಕಿರನ್ 180 ಕೆ. ಜಿ. ಡೆಡ್ಲಿಫ್ಟ್, ಹೃತಿಕ್ 90 ಕೆ.ಜಿ.ಬೆಂಚ್ ಪ್ರೆಸ್ಸ್ ಹಾಗೂ ಅಕ್ರಮ್ 135 ಕೆಜಿ ಸ್ಕ್ವಾಟ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಸಂಸ್ಥೆಯ ಮುಖ್ಯಸ್ಥ ಶಿಶಿರ್ ರಘುಚಂದ್ರ, ತರಬೇತುದಾರರಾದ ಅನೂಪ್ ಹಾಗೂ ಸ್ವಜ್ಜನ್ ರೈ, ಉಷಾ ರಘುಚಂದ್ರ, ಜಿಮ್ ನ ವಿದ್ಯಾರ್ಥಿಗಳು ಉಪ್ಥಿತರಿದ್ದರು.

Exit mobile version