Site icon Suddi Belthangady

ಗೇರುಕಟ್ಟೆ ಆಟೋ ಚಾಲಕ-ಮಾಲಕ ಸಂಘದ ಪದಾಧಿಕಾರಿಗಳ ಆಯ್ಕೆ

ಗೇರುಕಟ್ಟೆ: ಸ್ನೇಹ ಸಂಗಮ ಅಟೋ ಚಾಲಕ ಮಾಲಕರ ಸಂಘ (ರೀ) ಗೇರುಕಟ್ಟೆ ಇದರ ನೂತನ ಅಧ್ಯಕ್ಷರಾಗಿ ಜಿ.ವೈ.ಬದ್ರದ್ದೀನ್ ಹಾಗೂ ಕಾರ್ಯದರ್ಶಿಯಾಗಿ ಸಿದ್ದಿeಕ್ ಜಿ.ಹೆಚ್.ಉಪಾಧ್ಯಕ್ಷರಾಗಿ ಕುಶಾಲಪ್ಪ ಗೌಡ ಕಲಾಯಿತೊಟ್ಟು, ಜೊತೆ ಕಾರ್ಯದರ್ಶಿಯಾಗಿ ಲೋಕಿತ್, ಕೋಶಾಧಿಕಾರಿಯಾಗಿ ಗಣೇಶ್ ಕೆ.ಬಿ‌.ರೋಡ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಸಂಘದ ಹಿರಿಯ ಮಾರ್ಗದರ್ಶಕರಾದ ಜಾರಪ್ಪ ಶೆಟ್ಟಿ ನಾಳ, ಗೌರವಾಧ್ಯಕ್ಷ ಸತೀಶ್ ಶೆಟ್ಟಿ ನೆಲ್ಲಿಕಟ್ಟೆ, ಬಿ.ಎಂ.ಎಸ್.ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ಕುದ್ರಡ್ಕ, ಸ್ಥಳೀಯರಾದ ಅಬೂಬಕ್ಕರ್ ಎ.ಸಂದೀಪ್ ಪಂಚಮಾಲಕೋಡಿ, ನಾಸಿರದ್ಧೀನ್, ಅಬ್ದುಲ್ ರಹಿಮಾನ್, ಪಿ.ಬಿ.ಅಬೂಬಕ್ಕರ್, ರೊನಾಲ್ಡ್ ಪಿಂಟೊ, ರತ್ನಾಕರ ಪೂಜಾರಿ ಬಳ್ಳಿದಡ್ಡ, ಕೀರ್ತಿ ಕುಮಾರ್, ತಾರಾನಾಥ ಬಳ್ಳಿದಡ್ಡ, ರಕ್ಷಿತ್, ಶೇಕುಂಞ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ನಿಕಟ ಪೂರ್ವ ಅಧ್ಯಕ್ಷ ವಸಂತ ಶೆಟ್ಟಿ ಮಾವಿನಕಟ್ಟೆ ಅಧ್ಯಕ್ಷತೆ ವಹಿಸಿದ್ದರು.ನಿಕಟ ಪೂರ್ವ ಕಾರ್ಯದರ್ಶಿ ರಮೇಶ್ ಪೂಜಾರಿ ಲೆಕ್ಕ ಪತ್ರ ಮಂಡಿಸಿದರು.ಮಾಜಿ ಅಧ್ಯಕ್ಷ ಪದ್ಮನಾಭ ಕಾರ್ಯಕ್ರಮ ನಿರೂಪಿಸಿದರು.

Exit mobile version