Site icon Suddi Belthangady

ವೇಣೂರು ಸರಕಾರಿ ಪದವಿಪೂರ್ವ ಕಾಲೇಜು: ವಿದ್ಯೆ ನೀಡಿದ ವಿದ್ಯಾಲಯಕ್ಕೆ ಗೇಟ್ ಕೊಡುಗೆ ನೀಡಿದ ಜಗನ್ನಾಥ ದೇವಾಡಿಗ

ವೇಣೂರು: ವೇಣೂರು ಸರಕಾರಿ ಪದವಿಪೂರ್ವ ಕಾಲೇಜಿಗೆ ಇಲ್ಲಿಯ ಹಳೆ ವಿದ್ಯಾರ್ಥಿಯಾಗಿರುವ ಜಗನ್ನಾಥ ದೇವಾಡಿಗ ಹಂದೇವು ಅವರು ಕಾಲೇಜಿನ ಪ್ರವೇಶ ದ್ವಾರದ ಗೇಟ್ ಕೊಡುಗೆಯಾಗಿ ನಿರ್ಮಿಸಿಕೊಟ್ಟಿದ್ದಾರೆ.
ಇಂದು 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಗೇಟನ್ನು ಅನಾವರಣಗೊಳಿಸಿಸಲಾಯಿತು.

ಕಾಲೇಜಿನ ಪ್ರಾಚಾರ್ಯರಾದ ಗಂಗಾಧರ, ಉಪನ್ಯಾಸಕ ವೃಂದದವರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿ ಮಿತ್ರರ ಸಮ್ಮುಖದಲ್ಲಿ ದಾನಿ, ಭಾರತೀಯ ಜೀವ ವಿಮಾ ನಿಗಮದಲ್ಲಿ ಉದ್ಯೋಗದಲ್ಲಿರುವ ಜಗನ್ನಾಥ ದೇವಾಡಿಗ ಅವರು ಪ್ರಾಚಾರ್ಯರಿಗೆ ಕೀ ಹಸ್ತಾಂತರಿಸುವ ಮೂಲಕ ಅನಾವರಣ ಗೊಳಿಸಲಾಯಿತು.

ಈ ಸಂದರ್ಭದಲ್ಲಿ ಪ್ರಾಚಾರ್ಯರು ಕಾಲೇಜಿಗೆ ನೀಡಿದ ಕೊಡುಗೆಗೆ ಧನ್ಯವಾದ ತಿಳಿಸಿದರು.

Exit mobile version