Site icon Suddi Belthangady

ಬಂದಾರು: ವಾಲಿಬಾಲ್ ಪಂದ್ಯಾಟದಲ್ಲಿ ಬಂದಾರು ಗ್ರಾಮವು ರಾಜ್ಯಮಟ್ಟಕ್ಕೆ ಆಯ್ಕೆ

ಬಂದಾರು: ಈಶ ಸಂಸ್ಥೆಯ 15ನೇ ಗ್ರಾಮೋತ್ಸವದ ಆಶ್ರಯದಲ್ಲಿ ಆಡೋಣ ಸಂಭ್ರಮಿಸೋಣ ಮುನ್ನಡೆಯೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಆ.13 ರಂದು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಬಂದಾರು ಗ್ರಾಮವು ಪ್ರಥಮ ಬಹುಮಾನವನ್ನು ಗಳಿಸಿದೆ.

ದಕ್ಷಿಣ ಕನ್ನಡ ಪ್ರತಿನಿಧಿಸುತ್ತಿರುವ ತಂಡವು ಸೆ.3ರಂದು ಮೈಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಗಿದೆ.

ತಂಡದಲ್ಲಿ ಬಂದಾರಿನ ಯುವ ಪ್ರತಿಭೆಗಳಾದ ಭರತ್, ನಿತಿನ್, ಮೋಕ್ಷಿತ್ , ವಿಕ್ರಾಂತ್, ಗಗನ್, ನಿಶಾಂತ್, ಉಮೇಶ್ , ಹರೀಶ್ ಯೋಗೀಶ್, ಜಯ ಮುರ್ತಾಜೆ ಭಾಗವಹಿಸಿದ್ದರು.

Exit mobile version