Site icon Suddi Belthangady

ನೆರಿಯ: ರಕ್ತದ ಒತ್ತಡ ಕಡಿಮೆಯಿಂದ ಯುವತಿ ನಿಧನ

ನೆರಿಯ: ಗಂಡಿಬಾಗಿಲು ಜಾತಿಮಾರ್ ರಾಜು ರವರ ಪುತ್ರಿ ಸುಮ(19ವ) ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

ಎ.ಜೆ ಆಸ್ಪತ್ರೆಯಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದು, ಸುಮ ಅವರು ಆ.9ರಂದು ಜ್ವರಕ್ಕೆ ಮಾತ್ರೆ ಪಡೆದು ಮನೆಗೆ ತೆರಳಿದ್ದರು.ನಂತರ ಆ.11ರಂದು ಅನಾರೋಗ್ಯ ಏರುಪೇರು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳ್ಳಮಂಜ ಸಂಬಂಧಿ ಮನೆಗೆ ಹೋಗಿದ್ದು ಮತ್ತೆ ಆ.13 ರಂದು ವಿಪರೀತ ಅಸ್ವಸ್ತಗೊಂಡು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ರಕ್ತದ ಒತ್ತಡ ಕಡಿಮೆಯಾಗಿ ಸಾವನ್ನಪಿದ್ದಾರೆ.

ಮೃತರು ತಾಯಿ, ತಂದೆ,ಸಹೋದರನ್ನು ಅಗಲಿದ್ದಾರೆ.

Exit mobile version