Site icon Suddi Belthangady

ಹತ್ಯಡ್ಕ ಪ್ರಾ.ಕೃ.ಪ. ಸಹಕಾರಿ ಸಂಘದ ನೌಕರರಿಂದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ

ಅರಸಿನಮಕ್ಕಿ: ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ)ಅರಸಿನಮಕ್ಕಿ ಇಲ್ಲಿಯ ನೌಕರರ ಬಳಗದಿಂದ ನಿವೃತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪಿ.ತ್ಯಾಂಪಣ್ಣ ಶೆಟ್ಟಿಗಾರ್ ರವರಿಗೆ ಗೌರವಾರ್ಪಣೆ ಕಾರ್ಯಕ್ರಮವನ್ನು ಆಗಸ್ಟ್ 6 ರಂದು ಅರಸಿನಮಕ್ಕಿಯ ಮುಖ್ಯ ಶಾಖೆಯಲ್ಲಿ ಏರ್ಪಡಿಸಿದ್ದರು.

ಈ ಶುಭಸಂಧರ್ಭದಲ್ಲಿ ಪಿ. ತ್ಯಾಂಪಣ್ಣ ಶೆಟ್ಟಿಗಾರ್ ದಂಪತಿಗಳು ಮತ್ತು ಮಕ್ಕಳಾದ ಮಹೇಶ್ ಶೆಟ್ಟಿಗಾರ್, ದಿನೇಶ್ ಶೆಟ್ಟಿಗಾರ್ ಮತ್ತು ಕುಟುಂಬಸ್ಥರು, ಹಾಗೂ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರವಿಚಂದ್ರ ರಾವ್ ಅಂಗಡಿತೊಟ ಉಪಕಾರ್ಯದರ್ಶಿ ಹರಿಣಾಕ್ಷಿ , ಅಕೌಂಟೆಂಟ್ ಪಿ.ಕೃಷ್ಣಪ್ಪ ಗೌಡ ಮತ್ತು ಇನ್ನಿತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದು ಶ್ರೀಯುತರನ್ನು ಗೌರವಿಸಿದರು.

Exit mobile version