Site icon Suddi Belthangady

ಗೇರುಕಟ್ಟೆ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ

ಗೇರುಕಟ್ಟೆ: ಗೇರುಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘ (ನಿ.) ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆ ಆ.1ರಂದು ಗೇರುಕಟ್ಟೆ ಕ್ಷೀರ ಸಂಗಮದ ವಠಾರದಲ್ಲಿ ನಡೆಯಿತು.

ಚುನಾವಣಾ ಅಧಿಕಾರಿಯಾಗಿ ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ವಿ.ಪ್ರತೀಮಾ ಆಯ್ಕೆ ಪ್ರಕ್ರಿಯೆ ನಡೆಯಿತು.ಅಧ್ಯಕ್ಷರಾಗಿ ಜನಾರ್ದನ ಗೌಡ ಕೆ, ಉಪಾಧ್ಯಕ್ಷರಾಗಿ ಸಿರಿಲ್ ಪಿಂಟೋ, ನಿರ್ದೇಶಕರಾಗಿ ಕುಶಾಲವತಿ, ಗಿರಿಯಪ್ಪ ಗೌಡ ಕೆ, ವಸಂತ ನಾಯ್ಕ, ಕೇಶವ ಪೂಜಾರಿ ಕೆ, ಮೋಹನ ದಾಸ್ ಶೆಟ್ಟಿ, ಗಂಗಯ್ಯ ಗೌಡ, ರೇಖಾ ರುಕ್ಮಯ್ಯ ಇವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಗುಲಾಬಿ, ಕಳಿಯ ಗ್ರಾಮ ಪಂಚಾಯತು ಅಧ್ಯಕ್ಷೆ ಸುಭಾಷಿಣಿ ಕೆ.ಜನಾರ್ದನ ಗೌಡ, ಸದಸ್ಯರಾದ ದಿವಾಕರ ಎಮ್, ಸುಧಾಕರ ಮಜಲು, ವಿಜಯ ಕುಮಾರ್ ಕೆ, ಇಂದಿರಾ ಬಿ.ಶೆಟ್ಟಿ, ಶಕುಂತಲಾ ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಿರ್ದೇಶಕ ಶೇಖರ ನಾಯ್ಕ ಗೇರುಕಟ್ಟೆ, ಶಶಿಧರ ಶೆಟ್ಟಿ ಹೀರ್ಯ, ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ದಿನೇಶ್ ಗೌಡ ಕೆ.ಉಮೇಶ್ ಕೇಲ್ದಡ್ಕ, ಸಹಕಾರ ಬೆಳ್ತಂಗಡಿ ತಾಲೂಕು ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆ ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ನ್ಯಾಯತರ್ಪು ಹಾಲು ಉತ್ಪಾದಕರ ಸಂಘದ ನಿರ್ದೇಶಕ ಸೋಮಪ್ಪ ಗೌಡ ಕುಬಾಯ, ಕೆ.ಕುಶಾಲಪ್ಪ ಗೌಡ, ರಮೇಶ್ ಶೆಟ್ಟಿ ಮಲ್ಲೋಟ್ಟು, ಕರುಣಾಕರ ಶೆಟ್ಟಿ ಕೊರಂಜ, ಕೇಶವ ಪೂಜಾರಿ ನೆಲ್ಲಿಕಟ್ಟೆ, ವಿಠ್ಠಲ ಶೆಟ್ಟಿ ಉಪ್ಪಡ್ಕ, ಸಿದ್ದಪ್ಪ ಗೌಡ ಹೆಚ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version