Site icon Suddi Belthangady

ಅಳದಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ- ಸದಸ್ಯರಿಗೆ 65% ಬೋನಸ್, 25% ಡಿವಿಡೆಂಡ್

ಅಳದಂಗಡಿ: ಅಳದಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಸಭಾ ಭವನದಲ್ಲಿ ಜು.31ರಂದು ನಡೆಯಿತು.

ಸಂಘದ ಅಧ್ಯಕ್ಷ ಗಣೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಉಪಾಧ್ಯಕ್ಷರಾದ ಕೃಷ್ಣ ಭಟ್, ದ.ಕ.ಹಾಲು ಒಕ್ಕೂಟ ವಿಸ್ತರಣಾಧಿಕಾರಿ ಸುಚಿತ್ರಾ, ಪಶು ವೈದ್ಯಾಧಿಕಾರಿ ಡಾ.ಗಣಪತಿ ರಾವ್, ನಿರ್ದೇಶಕರಾದ ಶಿವ ಭಟ್, ಶಶಿಧರ ಶೆಟ್ಟಿ, ಪ್ರಶಾಂತ್ ವೇಗಸ್, ಆನಂದ ಮಡಿವಾಳ, ಗಣೇಶ್ ದೇವಾಡಿಗ, ಸುರೇಶ್ ಕುಲಾಲ್, ಗಿರಿಜಾ, ಪುಷ್ಪಾವತಿ, ಲಲಿತಾ, ಸುನಂದ ಉಪಸ್ಥಿತರಿದ್ದರು.

ನಿರ್ದೇಶಕ ಶಿವ ಭಟ್ ಸ್ವಾಗತಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕಾರ್ಯಕ್ರಮ ನಿರೂಪಿಸಿ ವರದಿ ಲೆಕ್ಕಪತ್ರ ಮಂಡಿ ಸಿದರು. ಮುಂದಿನ ಯೋಜನಗಳು ಅಧ್ಯಯನ ಪ್ರವಾಸ, ಕಟ್ಟಡ ದುರಸ್ತಿ,ಮಾಹಿತಿ ಶಿಭಿರ. ಸದಸ್ಯರಿಗೆ ಅಧ್ಯಕ್ಷ ಗಣೇಶ್ ದೇವಾಡಿಗ 65% ಬೋನಸ್ ಹಾಗು,25% ಡಿವಿಡೆಂಡ್ ಘೋಷಣೆ ಮಾಡಿ ವಿತರಣಾ ಚೆಕ್ ಗೆ ಸಹಿ ಮಾಡಿದರು.

Exit mobile version