Site icon Suddi Belthangady

ಸುದ್ದಿ ನ್ಯೂಸ್ ಚಾನೆಲ್ ನಿರೂಪಕ ಆದಿತ್ಯ ರಾವ್ ದೊಂಡೋಲೆಗೆ ಬೀಳ್ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ನ್ಯೂಸ್ ಚಾನೆಲ್ ನಿರೂಪಕರಾಗಿ ಮತ್ತು ಸುದ್ದಿ ಬಿಡುಗಡೆ ಪತ್ರಿಕೆಯ ವರದಿಗಾರರಾಗಿ ಕಳೆದ ಮೂರು ವರ್ಷಗಳಿಂದ ಕರ್ತವ್ಯ ನಿರ್ವಹಿಸಿ ಇದೀಗ ರಾಜ್ಯಮಟ್ಟದ ಪೊಲಿಟಿಕಲ್ 360 ನ್ಯೂಸ್ ಚಾನೆಲ್‌ನ ದಕ್ಷಿಣ ಕನ್ನಡ ಜಿಲ್ಲಾ ವರದಿಗಾರರಾಗಿ ಕಾರ್ಯ ನಿರ್ವಹಿಸಲಿರುವ ಆದಿತ್ಯ ರಾವ್ ದೊಂಡೋಲೆಯವರಿಗೆ ಸುದ್ದಿ ಬಿಡುಗಡೆ ಪತ್ರಿಕಾ ಕಛೇರಿಯಲ್ಲಿ ಜು.31ರಂದು ಬೀಳ್ಕೊಡಲಾಯಿತು.

ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ. ಶಿವಾನಂದ, ಸಿಇಓ ಸಿಂಚನ ಊರುಬೈಲು, ನಿಯೋಜಿತ ಸಂಪಾದಕ ಸಂತೋಷ್ ಕುಮಾರ್ ಶಾಂತಿನಗರ, ಕಚೇರಿ ವ್ಯವಸ್ಥಾಪಕ ಮಂಜುನಾಥ ರೈ ನಂಜೆ, ಚಾನೆಲ್ ಮುಖ್ಯಸ್ಥ ದಾಮೋದರ ದೊಂಡೋಲೆ, ಚಾನೆಲ್ ಪಾಲುದಾರ ಪ್ರವೀಣ್ ಕೆ.ಯಸ್, ಉಪಸಂಪಾದಕ ಪವನ್ ಕುಮಾರ್, ಹಿರಿಯ ವರದಿಗಾರ ಜಾರಪ್ಪ ಪೂಜಾರಿ ಬೆಳಾಲು, ವರದಿಗಾರರಾದ ಮನಿಷ್ ಅಂಚನ್, ನಿಶಾನ್ ಬಂಗೇರ, ಅಕೌಂಟೆಂಟ್ ನೈನಾ ಪ್ರಸಾದ್, ವೆಬ್‌ಸೈಟ್ ವಿಭಾಗದ ಮುಖ್ಯಸ್ಥೆ ದೀಪ್ತಿ, ಪ್ರಸರಣ ವಿಭಾಗದ ಮುಖ್ಯಸ್ಥ ಕೆ.ಯನ್. ಗೌಡ, ಜಾಹೀರಾತು ವಿಭಾಗದ ಮುಖ್ಯಸ್ಥ ಸಂದೀಪ್ ಶೆಟ್ಟಿ, ಸಿಬ್ಬಂದಿಗಳಾದ ದಿವಾಕರ, ರಮಾನಂದ, ಶ್ವೇತಾ, ಬ್ರಹ್ಮೋತ್ತಮ, ಭವಿಷ್, ತೇಜಸ್ವಿನಿ ಶೆಟ್ಟಿ, ತೇಜಸ್ವಿ, ಪ್ರೇಮಲತಾ, ಲಕ್ಷ್ಮಣ ಕಾವಟೆ ಮತ್ತು ಕುಶಾಲಪ್ಪ ಗೌಡ ಅಗಳಿ ಅವರು ಶುಭ ಹಾರೈಸಿದರು.

ಆದಿತ್ಯ ರಾವ್ ದೊಂಡೋಲೆ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

Exit mobile version