Site icon Suddi Belthangady

ಅಳದಂಗಡಿ: ದೈಲ ಮರಿಯನ್ ಡಿ’ಸೋಜ ನಿವಾಸಕ್ಕೆ ಸ್ಪೀಕರ್ ಯು. ಟಿ.ಖಾದರ್ ಭೇಟಿ

ಅಳದಂಗಡಿ: ಅಳದಂಗಡಿಯ ಹಿರಿಯ ಕಾಂಗ್ರೆಸ್ ಮುಖಂಡ ದೈಲ ಮರಿಯಣ್ ಡಿಸೋಜರವರ ನಿವಾಸಕ್ಕೆ ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು. ಟಿ.ಖಾದರ್ ರವರು ಸೌಹಾರ್ದ ಭೇಟಿ ನೀಡಿ ಆರೋಗ್ಯ ಹಾಗೂ ಯೋಗಕ್ಷೇಮ ವಿಚಾರಿಸಿದರು.ಸ್ಪೀಕರ್ ರವರನ್ನು ಮರಿಯನ್ ಡಿಸೋಜರವರು ತನ್ನ ಕುಟುಂಬಸ್ಥರ ಪರವಾಗಿ ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮರಿಯನ್ ಡಿ’ಸೋಜರವರ ಪುತ್ರಿಯರಾದ ಪ್ರಸ್ತುತ ಮಂಗಳೂರಿನ ಸೈಂಟ್ ಆನ್ಸ್ ಶಿಕ್ಷಕ ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ಸಿಸ್ಟರ್ ಪ್ರಮೀಳಾ ಡಿಸೋಜ ಹಾಗೂ ಸುಲ್ಕೇರಿಮೊಗ್ರು ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶಾಂತಿ ಡಿಸೋಜ, ಅಳಿಯ ಅವಿಲ್ ಡಿಸೋಜ ಹಾಗೂ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.

Exit mobile version