Site icon Suddi Belthangady

ಉಜಿರೆ: ಶ್ರೀ ಧ.ಮಂ ಪ.ಪೂ ಕಾಲೇಜು : ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಸಹಯೋಗದಲ್ಲಿ ವೃತ್ತಿ ಜೀವನದ ಪ್ರಯಾಣ ಎನ್ನುವ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಮಂಗಳೂರಿನ ಯೂನಿವರ್ಸಿಟಿ ಕನೆಕ್ಷನ್ ಸಂಸ್ಥೆಯ ಆಪ್ತ ಸಮಾಲೋಚಕಿ, ರಾಷ್ಟ್ರೀಯ ಮಟ್ಟದ ವೈಟ್ ಲಿಫ್ಟರ್ ಶ್ರದ್ಧಾ ಎಸ್ ನಾಯ್ಕ್ ಅವರು ವೃತ್ತಿ ಮಾರ್ಗದರ್ಶನ ನಡೆಸಿದರು.

ವಿವಿಧ ಕೋರ್ಸ್ ಗಳ ಮಾಹಿತಿ ಹಾಗೂ ವೃತ್ತಿಗಳ ಆಯ್ಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಗ್ರಂಥಪಾಲಕ ಮನೋಹರ್ ಶೆಟ್ಟಿ ಅವರು ಶ್ರದ್ಧಾಳನ್ನು ಸನ್ಮಾನಿಸಿದರು.ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಅಭಿನಂದನಾ ನುಡಿಗನ್ನಾಡಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ ಸ್ಮರಣಿಕೆ ನೀಡಿ ಗೌರವಿಸಿದರು.ರಾ. ಸೇ ಯೋಜನೆಯ ನಾಯಕ ಸುದರ್ಶನ ನಾಯಕ್ ಉಪಸ್ಥಿತರಿದ್ದರು.

ಸರಣ್ಯಾ ಸ್ವಾಗತಿಸಿ, ಪಲ್ಲವಿ ಪರಿಚಯಿಸಿ, ಪ್ರಥಮ್ ಜೈನ್ ನಿರೂಪಿಸಿ, ಚಾರಿತ್ರ್ಯ ವಂದಿಸಿದರು.

Exit mobile version